ದುರ್ಗದ ಹುಲಿ ಶಿಕಾರಿ

Author : ಎಂ ಮೃತ್ಯುಂಜಯಪ್ಪ

Pages 104

₹ 150.00




Year of Publication: 2020
Published by: ಎಂ ಎಂ ಪ್ರಕಾಶನ
Address: ಎಂ ಎಂ ಪ್ರಕಾಶನ 'ಬಸವಕಿರಣ' ಮಾಸ್ತಮ್ಮ ಲೇಔಟ್ , ಚಿತ್ರದುರ್ಗ
Phone: 9449421858

Synopsys

`ದುರ್ಗದ ಹುಲಿ ಶಿಕಾರಿ' ಎಂ ಮೃತ್ಯುಂಜಯಪ್ಪ ಅವರ ಕೃತಿಯಾಗಿದೆ. ಪ್ರಕೃತಿಯೊಂದಿಗೆ ತಾದ್ಯಾತ್ಮ ಬೆಳೆಸಿಕೊಂಡ ಚಾರಣ ಪ್ರಿಯ,ಇತಿಹಾಸ ಪ್ರೇಮಿ, ಸಾಹಿತ್ಯಾಸಕ್ತ, ಮಾಗಿದ ಹಿರಿಯ ಜೀವ, ಎಪ್ಪತ್ತೇಳರಲ್ಲೂ ಲವಲವಿಕೆ, ಕುಂದದ ಉತ್ದಾಹ, ಹೊಸತರ ಬಗ್ಗೆ ತುಡಿತ , ವರ್ತಮಾನದ ಬಗ್ಗೆ ಸ್ಪಂದಿಸುವ ಜೀವನ್ಮಖಿ! ಚಿತ್ರದುರ್ಗದ ಪ್ರಖ್ಯಾತ ಕಾದಂಬರಿಕಾರರಾದ ತರಾಸು ಮತ್ತು ಬಿ ಎಲ್ ವೇಣು ಅವರ ಒಡನಾಡಿಗಳೂ ಹೌದು. ತಮ್ಮ ಮೊದಲ ಪುಸ್ತಕಕ್ಕಾಗಿ ಈ ಸಂಧ್ಯಾ ವಯಸ್ಸಿನಲ್ಲೂ ಹುಲಿ ಬೇಟೆಕಾರರ ಬಗ್ಗೆ ಮಾಹಿತಿ ಸಂಗ್ರಹಿಸಲು ಅವರು ಪಟ್ಟ ಶ್ರಮವೇ ಮತ್ತೊಂದು ಪುಸ್ತಕವಾದೀತು. ಮಧ್ಯ ಕರ್ನಾಟಕದ ಚಿತ್ರದುರ್ಗ ಸುಡು ಬೇಸಿಗೆಯ ಬೆಂಗಾಡು. ಕೊರಕಲು- ಕಂದಕ, ಅಗಳು, ಬೆಟ್ಟ, ಗುಡ್ಡ, ಬಂಡೆಗಳ ನಡುವೆ ಕೋಟೆ- ಕೊತ್ತಲ ಕಟ್ಟಿ , ಕೆರೆ- ತಟಾಕಗಳನ್ನು ನಿರ್ಮಿಸಿ ಅರಸೊತ್ತಿಗೆಯನ್ನು ಕದಂಬರು, ಶಾತವಾಹನರು ಮತ್ತು ಪಾಳೆಯಗಾರರು ನಿಭಾಯಿಸಿದರು. ಚಿತ್ರದುರ್ಗದ ಚಂದ್ರವಳ್ಳಿ, ಜೋಗಿಮಟ್ಟಿ (ಮರಡಿ),ಆಡು ಮಲ್ಲೇಶ್ವರದ ಕಾಡು ಪ್ರದೇಶಗಳ ನಡುವೆ ಒಂದಿಷ್ಟು ತಂಪು ಗಾಳಿ ಬೀಸಿ ಮೈ , ಮನಸು ಪ್ರಫ಼ುಲ್ಲವಾಗುತ್ತದೆ.ಆದರೆ ಈ ಬೆಟ್ಟ- ಕಾಡು ಪ್ರದೇಶಗಳು ಕ್ರೂರ ಮೃಗಗಳ ವಸತಿ ಸ್ಥಳಗಳೂ ಹೌದು! ಹುಲಿ, ಚಿರತೆ, ಕರಡಿಗಳಂತೂ ಇಲ್ಲಿ ಮಾಮೂಲು! ರಮಣೀಯ ಸೌಂದರ್ಯದಲ್ಲೂ ರೌದ್ರತೆಯೂ ಇದ್ದದ್ದೇ!

About the Author

ಎಂ ಮೃತ್ಯುಂಜಯಪ್ಪ
(10 February 1945)

ಎಂ ಮೃತ್ಯುಂಜಯಪ್ಪ ಮೂಲತಃ ಚಿತ್ರದುರ್ಗದವರು. ಅವರು ಪತ್ರಿಕಾ ಬರಹಗಾರರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಜಾವಾಣಿ, ಸುಧಾ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆಯುತ್ತಿದ್ದಾರೆ. ಚಿತ್ರದುರ್ಗ ಕೋಟೆ ಮತ್ತು ಸ್ಮಾರಕಗಳ ಮಾಜಿ ಪ್ರಧಾನ ಕಾರ್ಯದರ್ಶಿ, ಇತಿಹಾಸ ಕೂಟ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ದುರ್ಗದ ಹುಲಿ ಶಿಕಾರಿ ...

READ MORE

Related Books