ಕುಮಾರವ್ಯಾಸ ಕಥಾಂತರ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 272

₹ 250.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರು 'ಕುಮಾರವ್ಯಾಸ ಕಥಾಂತರ'ದ ಮೂರನೆಯ ಸಂಪುಟವನ್ನು ಹೊರತಂದಿದ್ದಾರೆ. ಈ ಸಂಪುಟದ ವ್ಯಾಪ್ತಿಯಲ್ಲಿ ಉದ್ಯೋಗಪರ್ವ, ಭೀಷ್ಮ ಪರ್ವ ಮತ್ತು ದ್ರೋಣ ಪರ್ವ ಸೇರಿವೆ. ಗದುಗಿನ ನಾರಣಪ್ಪನ 'ಕುಮಾರವ್ಯಾಸ ಭಾರತ'ದ ಈ ಕಥಾಂತರವು ವಿಶೇಷವೆನಿಸಿದೆ. 

'ತಾರ್ಕಿಕ ಮತ್ತು ಆಶಯ ಪ್ರಧಾನ ಓದುಗಾರಿಕೆಯಿಂದ ಜಡ್ಡುಗಟ್ಟಿ ಹೋಗಿರುವ ಈವತ್ತಿನ ಸಾಂಸ್ಕೃತಿಕ ವಾತಾವರಣದಲ್ಲಿ ಪ್ರಕಟವಾಗುತ್ತಿರುವ ಕುಮಾರವ್ಯಾಸ ಕಥಾಂತರದ ಸಂಪುಟಗಳು ನಾರಣಪ್ಪನ ಶ್ರೀಮಂತ ಕಾವ್ಯ ಸಂಪತ್ತನ್ನು ಆಸ್ವಾದಿಸಲು ಹೊಸ ಕಾಲದ ಓದುಗರಿಗೆ ಪ್ರವೇಶ ಪಠ್ಯವಾಗುವುದರ ಜೊತೆಗೇ ನಮ್ಮ ಮಹತ್ವದ ಸಾಂಸ್ಕೃತಿಕ ಪಠ್ಯಗಳನ್ನು ನಾವೆಲ್ಲಾ ಓದಬೇಕಾದ ಪರ್ಯಾಯ ಮತ್ತು ಯುಕ್ತವಾದ ಕ್ರಮವನ್ನು ಕೂಡ ಅಂತಃಕರಣಪೂರ್ವಕವಾಗಿ ಸೂಚಿಸುತ್ತವೆ.

ಒಂದು ಕೃತಿಯನ್ನು ಏಕಕಾಲದಲ್ಲಿ ಎಷ್ಟು ವೈವಿಧ್ಯಮಯ ನೆಲೆಗಳಿಂದ ಓದಬಹುದು ಎಂಬುದಕ್ಕೆ ಈ ಕೃತಿ ಸಹಾಯಕವಾಗಿದೆ. ಇಲ್ಲಿ ಲೇಖಕರು ಕವಿಯಾಗಿ, ಭಾಷಾ ಶಾಸ್ತ್ರಜ್ಞನಾಗಿ,ದೇಸಿನುಡಿಗಟ್ಟುಮತ್ತು ಸಂಸ್ಕೃತಿಯ ವಕ್ತಾರರಾಗಿ ಹತ್ತು ಹಲವು ನೆಲೆಗಳಲ್ಲಿ ಕುಮಾರವ್ಯಾಸ ಭಾರತವನ್ನು ಗ್ರಹಿಸುವ ರೀತಿ ವಿಭಿನ್ನವಾಗಿದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books