ಸೂಕ್ತಿ ಸುಧೆ

Author : ಜಿ.ಎಸ್‌.ಕಲಾವತಿ ಮಧುಸೂದನ

Pages 80

₹ 100.00




Year of Publication: 2023
Published by: ಸ್ಪಂದನ ಸಿರಿ ಪ್ರಕಾಶನ
Address: #406. 11ನೇ ಅಡ್ಡ ರಸ್ತೆ, ಕುವೆಂಪುನಗರ, ಹಾಸನ-573201
Phone: 7204731877

Synopsys

`ಸೂಕ್ತಿ ಸುಧೆ’ ಜಿ.ಎಸ್.ಕಲಾವತಿಮಧುಸೂದನ ಅವರ ಮುಕ್ತಕಗಳ ಸಂಕಲನವಾಗಿದೆ. ನೈತಿಕತೆಯನ್ನರಿತು ಜೀವನದ ಬಂಡಿಯಲ್ಲಿ ಸಾಗದೇ, ಮೋಸ ವಂಚನೆ ಕಪಟಗಳನ್ನಿಡಿದು ಬಾಳುವವರ ಮುಖವಾಡ ಒಂದಲ್ಲ ಒಂದು ದಿನ ಕಳಚುವುದು ನಿಶ್ಚಿತ. ಕಾಲನ ನಿರ್ಣಯಕ್ಕೆ ನಾವೆಲ್ಲ ಕಟಿಬದ್ಧರಾಗಿರಲೇ ಬೇಕು.ಸೂತ್ರಧಾರಿ ಭಗವಂತ ನಾವೆಲ್ಲ ಪಾತ್ರಧಾರಿಗಳು ಮಾತ್ರ. ನಮ್ಮ ಕೆಲಸವನ್ನು ಸುತ್ತಮುತ್ತಲಿನ ಜನರು ನೋಡುತ್ತಾರೆ. ಭಗವಂತ ಮರೆಯಲ್ಲಿ ನಿಂತು ವೀಕ್ಷಿಸುತ್ತಾನೆ.ಆದರೆ ನಾವುಗಳು ಕಣ್ಮುಚ್ಚಿ ಹಾಲ್ಕುಡಿಯುವ ಬೆಕ್ಕಿನಂತಿರಬಾರದೆಂದು ಹಯಪ್ರಾಸದ ಚೌಪದಿಯಲ್ಲಿ ಸತ್ಯಾಂಶವನ್ನು ಜಗಕುಣಿಸಿರುವುದು ಸೂಕ್ತಿಗೆ ಸೂಕ್ತ.

About the Author

ಜಿ.ಎಸ್‌.ಕಲಾವತಿ ಮಧುಸೂದನ

ಜಿ.ಎಸ್.ಕಲಾವತಿಮಧುಸೂದನ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನವರು. ತಂದೆ ಜಿ.ಆರ್.ಶ್ರೀನಿವಾಸಯ್ಯ,ತಾಯಿ ಕೆ.ಪಿ.ರಾಜಮ್ಮ. ಹಿಂದಿ ಭಾಷೆಯಲ್ಲಿ ಬಿ.ಎ, ಬಿ.ಇ.ಎಡ್‌,ಹಾಗೂ ಸಮಾಜಶಾಸ್ತ್ರದಲ್ಲಿ ಎಮ್‌.ಎ ಸ್ನಾತಕೋತರ ಪದವಿ ಪಡೆದಿದ್ದಾರೆ. ಅವರು ಪ್ರಾಥಮಿಕ, ಮಾಧ್ಯಮಿಕ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೋಘವಾಹಿನಿಯಲ್ಲಿ ನಿರ್ದೆಶಕಿಯಾಗಿ, ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಕಲರವ, ಸಂಕೀರ್ತನಮಾಲ, ಶೃತಿಮಾಲ,ಜೇನಹನಿ,ಅಂತರತಮ ನೀ ಗುರು, ಶ್ರೀರಂಗ ಮಹಾತ್ಮೆ ,ಸೌಗಂಧಿಕ, ಮಧುಲತೆ,ಬೆಳ್ಳಿಬಟ್ಟಲೊಳು, ಶ್ರೀ ಶ್ರವಣ ಕೀರ್ತನ,ಸ್ಪಂದನ ಸಿರಿ, ನೆನಪಿನ ಪಯಣ, ಸ್ಪಂದನ,ಅಪರಾಧಿ ನಾನಲ್ಲ . ಪ್ರಶಸ್ತಿಗಳು: “ಸಮಾಜ ಸೇವಾ” ಪ್ರಶಸ್ತಿ, “ಸಾಹಿತ್ಯ ಮತ್ತು ಸಾಂಸ್ಕೃತಿಕ ಭೂಷಣ”ಪ್ರಶಸ್ತಿ , ನಾರಿಶಕ್ತಿ ರಾಜ್ಯ ಪ್ರಶಸ್ತಿ, ‘ಮಹಿಳಾ ...

READ MORE

Related Books