ಮನದಾಳದ ಮಾತು

Author : ಪಂಚಾಕ್ಷರಿ ಬಿ. ಪೂಜಾರಿ

Pages 75

₹ 50.00




Year of Publication: 2011
Published by: ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನ ಪೂಜಾರಿಗಳು,
Address: ದಂಡಗುಂಡ ತಾ: ಚಿತ್ತಾಪುರ, ಜಿಲ್ಲೆ: ಕಲಬುರಗಿ

Synopsys

ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರ ಕೃತಿ-ಮನದಾಳದ ಮಾತು. ನುಡಿಮುತ್ತುಗಳನ್ನು ಸಂಗ್ರಹಿಸಲಾಗಿದೆ. ಸಾಹಿತಿ ಪಂ. ವೆ. ಕೊಟ್ರೇಶ್ವರ ಸ್ವಾಮಿ ಅವರು ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ  ಹಾಗೂ ಸಾಹಿತಿ ಜಿ.ಎಸ್. ಬಸವರಾಜ ಶಾಸ್ತ್ರಿ ಅವರು ಮುನ್ನುಡಿ ಬರೆದು ‘‘ಲೇಖಕರು ತಮ್ಮ ಜೀವನದ ಅನುಭವದ ನುಡಿಗಳನ್ನು ಸಮಾಜಮುಖಿಯಾಗಿ ಚಿಮ್ಮಿಸಿದ್ದಾರೆ. ದೇವರ ಇರುವಿಕೆಯನ್ನು ತಿಳಿಸಿ, ಸಮಾಜದಲ್ಲಿಯ ಮೂಢನಂಬಿಕೆಗಳ ವಿರುದ್ಧ ಸಿಡಿದೆದ್ದಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಅವರು ಕೃತಿಗೆ ಬೆನ್ನುಡಿ ಬರೆದು ‘ಕೃತಿಯಲ್ಲಿಯ ನವಿರಾದ ಮಾತುಗಳು ಮನಸ್ಸನ್ನು ಮುಟ್ಟುತ್ತವೆ. ಹೃದಯವನ್ನು ಅರಳಿಸುತ್ತವೆ. ಜಾತಿ, ಧರ್ಮ ಲಿಂಗ ವ್ಯತ್ಯಾಸವೇ ವಿಜೃಂಭಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಈ ಕೃತಿಯು ಉತ್ತಮ ವಿಚಾರಗಳನ್ನು ಬೋಧಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

 

 

About the Author

ಪಂಚಾಕ್ಷರಿ ಬಿ. ಪೂಜಾರಿ
(10 August 1960)

ಕವಿ ಪಂಚಾಕ್ಷರಿ ಬಿ. ಪೂಜಾರಿ  ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದವರು. ವೃತ್ತಿಯಿಂದ  ದಂಡಗುಂಡ ಬಸವಣ್ಣನ ದೇವಸ್ಥಾನದ ಅರ್ಚಕರು. ಬಿ.ಎ. ಪದವೀಧರರು. ತಂದೆ ಬಸವಣ್ಣೆಪ್ಪ ಪೂಜಾರಿ ತಾಯಿ ಮಹಾದೇವಮ್ಮ ಪೂಜಾರಿ. ದಂಡಗುಂಡ ಸರಕಾರಿ  ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು. ಕಸಾಪ ದಿಗ್ಗಾವಿ ವಲಯ ಅಧ್ಯಕ್ಷರು.  ಕೃತಿಗಳು: ಅಂತರಾಳದ ಪ್ರಭೆ (ವಚನಗಳ ಸಂಕಲನ), ಗುಡ್ಡದ ಗುಡುಗು (ತತ್ವಪದಗಳ ಸಂಕಲನ), ಮನದಾಳದ ಮಾತು (ನುಡಿಮುತ್ತುಗಳು), ತತ್ವಪದ ಸಂಪದ (ತತ್ವಪದಗಳ ಸಂಪಾದನಾ ಗ್ರಂಥ), ದಂಡಗುಂಡ ಬಸವಣ್ಣ ನಾಮಾವಳಿ,  ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ, ದಿಗ್ಗಾವಿ ದೀಪ (ಕವನ ಸಂಕಲನ)  ಪ್ರಶಸ್ತಿ-ಗೌರವಗಳು: ಚಿತ್ತಾಪುರ ತಾಲೂಕು ಕನ್ನಡ ...

READ MORE

Related Books