ಬದುಕಿನ ಬಹುದೊಡ್ಡ ಆಯಾಮ ಪರಿಚಯವಾಗುವುದು ಇಂತಹ ಕಥೆಗಳಿಂದಲೇ!


'ಕಾಡು ಕಾಯುವವರು' ಮತ್ತು 'ಅವನತಿ' ತುಂಬಾ ಕಾಡಿದ ಕಥೆಗಳು. ನೌಶಾದ್ ಪ್ರಪಂಚವನ್ನು ನೋಡುವ ರೀತಿಯೇ ಅವರ ಕಥೆಗಳ ಬಹುದೊಡ್ಡ ಹೂರಣ ಹಾಗೂ ಪ್ಲಸ್ ಪಾಯಿಂಟ್, ಆದ್ದರಿಂದಲೇ ಅವು ಅನೇಕ ಮನಸುಗಳನ್ನು ತಟ್ಟುವುದು ಅನ್ನೋದು ನನ್ನ ವೈಯಕ್ತಿಕ ಭಾವನೆ'. ಎನ್ನುತ್ತಾರೆ ನವೀನ್ ಕುಮಾರ್ ಬಜ್ಜಳ್ಳಿ. ಅವರು ಲೇಖಕ ನೌಶಾದ್ ಜನ್ನತ್ತ್ ಬರೆದ 'ಕಾಡು ಕಾಯುವವರು' ಕಥಾ ಸಂಕಲನಕ್ಕೆ ಬರೆದ ಅನಿಸಿಕೆ...

ಇದೊಂದು ಇತ್ತೀಚೆಗೆ ಬಿಡುಗಡೆಯಾದ, 11 ಕಥೆಗಳ ಸಂಕಲನ, ಅದನ್ನು ಸ್ವಚ್ಛವಾಗಿ ನೇಯ್ದು ಕೊಟ್ಟಿರುವ ಲೇಖಕ ನೌಶಾದ್ ಜನ್ನತ್ತ್ (Noushad jannat) ಅವರ ಅನುಭವ ಬುತ್ತಿ ಇಲ್ಲಿ ಕೆಲಸ ಮಾಡಿದೆ, ಓದಿದ ನಂತರ ಅಲ್ಲಿನ ವಿಷಯಗಳು ಕಾಡುತ್ತವೆ, ಚಿಂತನೆಗೆ ದೂಡುತ್ತವೆ, ಅಷ್ಟೇ ಯಾಕೆ ನಮ್ಮ ಬದುಕಿಗೆ ಹತ್ತಿರವಾಗಿಯೇ ಇದೆ ಅನ್ನಿಸುತ್ತವೆ.

ಪುಟ್ಟ ಕಥೆಗಳ ತಾಕತ್ತೇ ಅಂತಹುದ್ದು, ಕಾಡದಿದ್ದರೆ ಕಥೆಯ ಉಪಯೋಗವಾದರೂ ಏನು ಅಲ್ವಾ? ಸುಂದರ ಸರಳ ಭಾಷೆಯಿಂದ, ಕಾಡಿನ ವಾತಾವರಣ ಪರಿಚಯ ಮಾಡುತ್ತ, ಅಲ್ಲಿನ ಜನರ ಬದುಕನ್ನು ತಿಳಿಸುತ್ತಾ ಸೂಕ್ಷ್ಮವಾಗಿ ಒಂದು ಸಂದೇಶ ಪ್ರತಿಕಥೆಯಲ್ಲಿ ಕೊಡುತ್ತಾ ಹೋಗುತ್ತಾರೆ ಲೇಖಕ. ಇಲ್ಲಿ ಕಾಡು ಕಾಯುವವರು ಮತ್ತು ಅವನತಿ ತುಂಬಾ ಕಾಡಿದ ಕಥೆಗಳು. ನೌಶಾದ್ ಪ್ರಪಂಚವನ್ನು ನೋಡುವ ರೀತಿಯೇ ಅವರ ಕಥೆಗಳ ಬಹುದೊಡ್ಡ ಹೂರಣ ಹಾಗೂ ಪ್ಲಸ್ ಪಾಯಿಂಟ್, ಆದ್ದರಿಂದಲೇ ಅವು ಅನೇಕ ಮನಸುಗಳನ್ನು ತಟ್ಟುವುದು ಅನ್ನೋದು ನನ್ನ ವೈಯಕ್ತಿಕ ಭಾವನೆ.

ಓದಿದ ನಂತರ ನನಗೆ ಅನ್ನಿಸಿದ್ದು, ಇಂತಹ ಕಥೆಗಳನ್ನು ಹೆಚ್ಚೆಚ್ಚು ಜನರು ಓದುವ ಅವಶ್ಯಕತೆಯಿದೆ, ಯಾಕಂದ್ರೆ ಬದುಕಿನ ಬಹುದೊಡ್ಡ ಆಯಾಮ ಪರಿಚಯವಾಗುವುದು ಇಂತಹ ಕಥೆಗಳಿಂದಲೇ.

ಕೃತಿ : ಕಾಡು ಕಾಯುವವರು
ಲೇಖಕ : ನೌಶಾದ್ ಜನ್ನತ್ತ್
ಪ್ರಕಾಶನ : ನಮ್ಮ ಕೊಡಗು 
ಬೆಲೆ : 140/- 

MORE FEATURES

'ಪುನರ್ನವ': ಸರಳ ಕನ್ನಡದಲ್ಲಿ ಬೆರಗುಗೊಳಿಸುವ ಕಥನ

05-12-2025 ಬೆಂಗಳೂರು

ಸರಳ ಭಾಷೆಯಲ್ಲಿ ಓದುಗರನ್ನು ಮುಟ್ಟುವ ಬಲಂಧರೆಯಂತಹ ಮಹಾಭಾರತ  ನಿತ್ಯ ಓದುಗರಿಗೂ ಅಪರಿಚಿತವೆ ಎನ್ನಬಹುದಾದ ಆಕೆಯ ಪಾ...

'ಕೃಷ್ಣಯ್ಯನ ಕೊಳಲು': ಆಧುನಿಕ ರಾಜಕೀಯದ ಕನ್ನಡಿ!

04-12-2025 ಬೆಂಗಳೂರು

ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಹಿರಿಯ ಲೇಖಕ...

ರಂಗದ ಮೇಲೆ ಪ್ರಯೋಗ ಕಂಡರೆ ಅತ್ಯಂತ ಸಂತೋಷ

04-12-2025 ಬೆಂಗಳೂರು

"ಈ ನಾಟಕ ಬರೆಸಿಕೊಳ್ಳುವಾಗ ಅತ್ಯಂತ ಖುಷಿ ಕೊಟ್ಟಿದೆ ಹಾಗೇ ಓದುಗರಾದ ನಿಮಗೂ ನೆಮ್ಮದಿ ಕೊಡಲೆಂಬ ಆಶಯ. ರಂಗದ ಮೇಲೆ ಪ...