ಈ ಪುಸ್ತಕ ಓದುವಾಗ ಇಲ್ಲಿಂದಲೇ ಶುರುಮಾಡಬೇಕೆಂಬದು ಇಲ್ಲ


"ಎಲ್ಲೊ ಒಂದು ಮಾತು ಕೇಳಿದ್ದೆ 'ಈಗಿನ ಕಾಲದಲ್ಲಿ ಯಾರಾದರೂ ಏನಾದರೂ ಬರೆದರೆ ಅದು ಹಿಂದೆ ಎಂದೋ ಯಾರೋ ಬರೆದು ಸೈ ಎನಿಸಿಕೊಂಡಿರುತ್ತಾರೆ' ಅದೇ ವಿಚಾರವನ್ನ ಅವರದ್ದೆ ಧಾಟಿಯಲ್ಲಿ ಬರೆದು ಕೊಂಚ ಬೇರೆ ವಿಚಾರಗಳು ಬೆರೆಸಿ ಹೊಸ ವ್ಯಕ್ತಿತ್ವಗಳ ಬಗ್ಗೆ ಪರಿಚಯಸಿ ಸೈ ಎನಿಸಿಕೊಳ್ಳುವುದರಲ್ಲಿ 'ದೀಕ್ಷಿತ್'ಅವರು ನೂರಕ್ಕೆ ನೂರು ಗೆದ್ದಿದ್ದಾರೆ ಎನ್ನಬಹದು," ಎನ್ನುತ್ತಾರೆ ಮಂಜುನಾಥ್ ಚಿನಕುಂಟಿ. ಅವರು ದೀಕ್ಷಿತ್ ನಾಯರ್ ಅವರ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿ ಕುರಿತು ಬರೆದ ಅನಿಸಿಕೆ.

ನಮ್ಮ ಸೋಲಿಗೆ, ದುಃಖಕ್ಕೆ, ಕೋಪಕ್ಕೆ ಇವಕ್ಕೆಲ್ಲಾ ಈಗಿನ ಕಾಲಕ್ಕೆ ಇಂತದ್ದೆ ಕಾರಣ ಬೇಕಿಲ್ಲ. ನೂರಾರು ಕಾರಣಗಳು ಹೇಳಿ ಸಾರಸಗಟಾಗಿ ಬೇರೆಯವರ ಮೇಲೆ ಹಾಕಿ ಇಲ್ಲ ನಮ್ಮಿಂದ ಸಾಧಿಸಲು, ಬದುಕಲು ಆಗುವುದಿಲ್ಲವೆಂದು ಒಂದೆರಡು ಹನಿ ಕಣ್ಣೀರು ಹಾಕಿ ಮೂಲೆ ಗುಂಪು ಸೇರಿ ಬಿಡುತ್ತೇವೆ.

ಯಾಕೆ ಹೀಗೆ ನಮ್ಮಿಂದ ಆಗದು ಎನ್ನುವುದು ಇದೆಯಾ? ಈ ಕಷ್ಟಗಳು ನಮಗೆ ಮಾತ್ರವೇ? ಇಲ್ಲಿ ಎಲ್ಲ ಸೂಚನೆಗಳು ನಮ್ಮ ವಿರುದ್ದವೇ ನಡೆಯುತ್ತವೆಯ? ಹೀಗೆ ಬದುಕಿನಲ್ಲಿ ಸೋಲಲು ನೂರಾರು ಕಾರಣಗಳನ್ನು ಹೇಳುತ್ತಾ ಅಳುತ್ತಾ ನಮ್ಮ ಜೀವನವನ್ನೇ ಮುಗಿಸಿ ಬಿಡುತ್ತೇವೆ. ಇಂಥ ಸಮಸ್ಯೆಗಳಿಗೆ ಇಂತದ್ದೇ ಉತ್ತರ ಹುಡುಕುವುದು ಹೇಗೆ ಎನ್ನುವುದು ನಮಗಲ್ಲ ಈ ಭೂಮಿಯ ಮೇಲೆ ಎಷ್ಟೆಲ್ಲಾ ಸಾಧನೆಗಳು ಮಾಡಿದವರಿಗೂ ಕಾಡಿರುವ ಪ್ರೆಶ್ನೆ ಆದರೆ ಉಳಿದವರು ಗೆದ್ದರು ನಾವು ಇನ್ನು ಹಿಂದೆಯೆ ಉಳಿಯುತ್ತಿದ್ದೇವೆ ಅಲ್ವಾ. ಯಾಕೆ?

ಹೀಗೆ ಜೀವನದಲ್ಲಿ ಹಿಂದೆ ಉಳಿದಾಗ, ಸತ್ತಿರುವ ಬದುಕನ್ನು ಎದ್ದೇಳಿಸಲೆಂದೇ ಅಲ್ಲಲ್ಲಿ ಕೆಲವು ವ್ಯಕ್ತಿಗಳ ಬದುಕುವುದನ್ನ,ಬದುಕಿರುವುದನ್ನ ಕೇಳ್ಬೇಕು ಇಲ್ಲ ಓದಬೇಕು ಆವಾಗ ನಮ್ಮ ಬುದ್ದಿಗೆ ಅರಿವು ಬಡಿದು ಕೊಂಚ ಕದಲುತ್ತೇವೆ. ನನಗೆ ತಿಳಿದ ಮಟ್ಟಿಗೆ ಇಂಥ ನಿಜ ಜೀವನದ ಸಾಧಕರ ಬಗ್ಗೆ ಬರೆದು ಸೈ ಎನಿಸಿಕೊಂಡವರು ಮಣಿಕಾಂತ ಸರ್ ಹಾಗೂ ಇನ್ನು ಕೆಲವರು. ಈಗ ಇಂಥದ್ದೇ ಅಂಕಣಗಳಿಂದ ಕೂಡಿದ ಪುಸ್ತಕ ಬಂದಿರುವುದು ವಯಸ್ಸು ಬರಿ ಇಪ್ಪತ್ತನಾಲ್ಕು ತೆಳ್ಳನೆಯ ದೇಹವುಳ್ಳ ನನ್ನ ನೆಚ್ಚಿನ ಬರಹಗಾರ 'ದೀಕ್ಷಿತ್ ನಾಯರ್' ಅವರ 'ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ'?.

ಎಲ್ಲೊ ಒಂದು ಮಾತು ಕೇಳಿದ್ದೆ 'ಈಗಿನ ಕಾಲದಲ್ಲಿ ಯಾರಾದರೂ ಏನಾದರೂ ಬರೆದರೆ ಅದು ಹಿಂದೆ ಎಂದೋ ಯಾರೋ ಬರೆದು ಸೈ ಎನಿಸಿಕೊಂಡಿರುತ್ತಾರೆ' ಅದೇ ವಿಚಾರವನ್ನ ಅವರದ್ದೆ ಧಾಟಿಯಲ್ಲಿ ಬರೆದು ಕೊಂಚ ಬೇರೆ ವಿಚಾರಗಳು ಬೆರೆಸಿ ಹೊಸ ವ್ಯಕ್ತಿತ್ವಗಳ ಬಗ್ಗೆ ಪರಿಚಯಸಿ ಸೈ ಎನಿಸಿಕೊಳ್ಳುವುದರಲ್ಲಿ 'ದೀಕ್ಷಿತ್' ಅವರು ನೂರಕ್ಕೆ ನೂರು ಗೆದ್ದಿದ್ದಾರೆ ಎನ್ನಬಹದು. ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ಇದು ಹಾಯ್ ಬೆಂಗಳೂರಿನಲ್ಲಿ ಪ್ರಕಟವಾದ ಅಂಕಣಗಳೇ ಪುಸ್ತಕವಾಗಿ ಹೊರ ಬಂದಿದೆ. ಈ ಪುಸ್ತಕದಲ್ಲಿ ಮೂವತ್ತಾರು ಅಂಕಣಗಳಿದ್ದು ಎಲ್ಲವು ಒಂದಕ್ಕಿಂತ ಒಂದು ವಿಭಿನ್ನವಾಗಿ ಒಂದೊಳ್ಳೆ ಮಾಹಿತಿ ಹಾಗೂ ವೈಯಕ್ತಿಕ ಬದುಕಲ್ಲಿ ಕುಗ್ಗಿದಾಗ ನಮ್ಮನ್ನು ಪ್ರೇರೆಪಿಸುವ ಬರಹಗಳಾಗಿವೆ.

ಈ ಪುಸ್ತಕ ಓದುವಾಗ ಇಲ್ಲಿಂದಲೇ ಶುರುಮಾಡಬೇಕೆಂಬದು ಇಲ್ಲ. ಎಲ್ಲಿಂದಲೂ ಬೇಕಾದರೂ ಪ್ರವೇಶಿಸಿ ಓದಲು ಅಣಿಯಾಗಬಹದು. ಇಲ್ಲಿ ಏನೆಲ್ಲಾ ಸಿಗುತ್ತದೆ ಅನ್ನುವುದನ್ನು ಕೊಂಚ ತೆರೆದಿಟ್ಟ ಮನಸ್ಸಿನಿಂದ ಹೇಳುತ್ತಾ ಹೋಗುತ್ತೇನೆ. ಮೊದ ಮೊದಲು ಬರುವವರೆ ನಮ್ಮ 'ಐದು' ರೂಪಾಯಿ ಡಾಕ್ಟರ್ ಡಾ.ಶಂಕರೆಗೌಡ್ರು ಅವರ ಬಗ್ಗೆ. ಪುಸ್ತಕ ಸಂತ ಸೈಯದ್ ಇಸಾ ಖ್ ಅವರ ಬಗ್ಗೆ. ಗಂಡಸರು ಕೂಡ ಭಾರಿ ತೂಕದ ವಾಹನಗಳನ್ನು ಓಡಿಸಲು ಅಲ್ಲಡುತ್ತಾರೆ. ಬರೋಬ್ಬರಿ ಹನ್ನೆರೆಡು ಭಾರಿ ತೂಕದ ವಾಹನ ಲೈಸನ್ಸ್ ಪಡೆದು ಗಿನ್ನಿಸ್ ಬುಕ್ ಸೇರಿದ ವನಿತೆ 'ರಾಧಾ ಮಣಿಯಮ್ಮ'ನವರ ಬಗ್ಗೆ. ಸತ್ಯಹರಿಶ್ಚಂದ್ರನಂತೆ ಸತ್ಯತೆಯಿಂದ ಸ್ಮಶಾನದಲ್ಲಿ ಬದುಕುತ್ತಿರುವ ಗಟ್ಟಿಗಿತ್ತಿ ನೀ ಲ್ಲಮ್ಮನವರ ಬಗ್ಗೆ. ಬರೋಬ್ಬರಿ ಐನೂರ ಅರವತ್ತು ಕೃತಿಗಳನ್ನು ಬರೆದು ಇನ್ನು ಬರೆಯುವುದು ಓದುವುದು ಸಾಕಷ್ಟು ಇದೇ ಎನ್ನುವ ನಮ್ಮೆಲ್ಲರ ಪ್ರದೀಪ್ ಕುಮಾರ್ ಹೆಬ್ರಿ ಸರ್ ಅವರ ಬಗ್ಗೆ. ಕಣ್ಣಿಲ್ಲದಿದ್ದರು ಎಷ್ಟೋ ಜೀವಗಳಿಗೆ ದಾರಿ ದೀಪವಾಗಿ ಬದುಕುತ್ತಿರುವ 'ಅಪ್ಜಲ್ ಮೊಹಮ್ಮದ್'ರವರ ಬಗ್ಗೆ. ಕನ್ನಡಕ್ಕೆ ಹೊಸ ಪದಗಳನ್ನು ಕೊಟ್ಟ ಕೆ.ರಾಜಕುಮಾರ್ ಸರ್ ಅವರ ಬಗ್ಗೆ. ಹೀಗೆ ಸಾಮಾನ್ಯರಂತಿರುವ ಅಸಾಮಾನ್ಯರ ಬಗ್ಗೆ ನಮಗೆ ಮಾಹಿತಿಗಳು ಈ ಪುಸ್ತಕದಲ್ಲಿ ಸಿಗುತ್ತದೆ. ಅಷ್ಟೇ ಅಲ್ಲ ನಮ್ಮ ಬೆನ್ನ ಹಿಂದೆ ಮಾತನಾಡುವ ಆ ನಾಲ್ಕು ಜನರ ಬಗ್ಗೆ ನಮ್ಮ ಉತ್ತರ ಹೇಗೆ ಇರಬೇಕೆಂಬುದು. ಒಂದೊಳ್ಳೆ ಭರವಸೆಯ 'ಸ್ಪರ್ಶದ ಬಗ್ಗೆ'. ಗೆಳೆಯನ ಸಾಂತ್ವನದ ಬಗ್ಗೆ. ಹೀಗೆ ಒಂದು ರೀತಿ ಎಲ್ಲಾ ವಿಚಾರಗಳ ಮೇಲೆ ಬರೆದಿದ್ದಾರೆ ಎನ್ನಬಹುದು. ಇದು ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಓದಬಹುದಾದ ಪುಸ್ತಕ.

 

MORE FEATURES

ಬೂಕರ್‌ ಅಂಗಳದಲ್ಲಿ ಭಾರತ; ಗೀತಾಂಜಲಿಶ್ರೀ ದಾರಿಯಲ್ಲಿ ಬಾನು ಮುಷ್ತಾಕ್

20-05-2025 ಬೆಂಗಳೂರು

ಅರುಂಧತಿ ರಾಯ್, 1997ರ ಬೂಕರ್‍ ಪ್ರಶಸ್ತಿ ಸಮಾರಂಭದಲ್ಲಿ. 2006 ರಲ್ಲಿ ಪ್ರಶಸ್ತಿ ಪಡೆದ ಕಿರಣ್ ದೇಸಾಯ್. ...

ಲಂಡನ್- ಇಂದು ಬೂಕರ್‌ ಪ್ರಶಸ್ತಿ ಘೋಷಣೆ ; ಪ್ರಶಸ್ತಿ ಕಿರು ಪಟ್ಟಿಯಲ್ಲಿ ಕನ್ನಡದ `ಹೃದಯ ದೀಪ' ಬಾನು ಮುಷ್ತಾಕ್

20-05-2025 ಲಂಡನ್‌

ಲಂಡನ್: ದಕ್ಷಿಣ ಭಾರತ ಭಾಷಾ ಸಾಹಿತ್ಯ ಲೋಕದ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ಕನ್ನಡದ ಲೇಖಕಿಯೊಬ್ಬರು ಈ ಪ್ರತಿಷ್ಠಿತ...

ನಿತ್ಯ ಬದುಕಿನ ವ್ಯವಹಾರದೊಂದಿಗಿನ ಕೌಟುಂಬಿಕ ಚಿತ್ರಣವನ್ನು ಇಲ್ಲಿ ಕಾಣಬಹುದು

18-05-2025 ಬೆಂಗಳೂರು

"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...