ನಟರಾಜ್ ಹುಳಿಯಾರ್ ಮತ್ತು ಬಂಜಗೆರೆ ಜಯಪ್ರಕಾಶ್ ಗೆ ಡಾ. ಜಿ.ಎಸ್ ಶಿವರುದ್ರಪ್ಪ ವಿಮರ್ಶಾ ಪ್ರಶಸ್ತಿ

Date: 18-11-2022

Location: ಬೆಂಗಳೂರು


ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಹೆಸರಿನಲ್ಲಿ ನೀಡುವ 2022ನೇ ಸಾಲಿನ ಜಿ.ಎಸ್.ಎಸ್ ವಿಮರ್ಶಾ ಪ್ರಶಸ್ತಿಗಾಗಿ ವಿಮರ್ಶಕರಾದ ನಟರಾಜ್ ಹುಳಿಯಾರ್ ಮತ್ತು ಬಂಜಗೆರೆ ಜಯಪ್ರಕಾಶ್ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 15,000 ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಗೌರವಗಳನ್ನು ಒಳಗೊಂಡಿದೆ. 

‘ಜಿ.ಎಸ್.ಎಸ್ ವಿಶ್ವಸ್ಥ ಮಂಡಳಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕರು ಎಸ್. ನಟರಾಜ ಬೂದಾಳು ಹಾಗೂ ಕಾರ್ಯದರ್ಶಿ ಬಸವರಾಜ ಕಲ್ಗುಡಿ ತಿಳಿಸಿದ್ದಾರೆ.

2021ನೇ ಸಾಲಿನಲ್ಲಿ ವಿಮರ್ಶಕರಾದ ಗುರುಲಿಂಗ ಕಾಪಸೆ ಹಾಗೂ ಎಚ್.ಎಸ್ ಶ್ರೀಮತಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು. ಡಾ. ಜಿ.ಎಸ್.ಶಿವರುದ್ರಪ್ಪ ಅವರ ಜನ್ಮದಿನ ಫೆ. 7, 2023ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

MORE NEWS

ರಂಗಸ್ವಾಮಿ ಮೂಕನಹಳ್ಳಿ ಅವರ ‘ಜಪಾನಿನಲ್ಲಿ ರಂಗ’ ಕೃತಿಯ ಲೋಕಾರ್ಪಣಾ ಸಮಾರಂಭ

11-02-2025 ಬೆಂಗಳೂರು

ಬೆಂ‌ಗಳೂರು: ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ "ಜಪಾನಿನಲ್ಲಿ ರಂಗ" ಕೃತಿಯು ನಗರದ ವಿಶ್ವವಾಣಿ ಟಿವಿ ಕ...

ಡಾ. ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಯ್ಕೆ

10-02-2025 ಬೆಂಗಳೂರು

ಬೆಂಗಳೂರು: ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ (ರಿ.) 2024ನೇ ಸಾಲಿನ “ಡಾ. ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಕ...

ಮರಾಠಿ ನಾಟಕಗಳ ಕನ್ನಡ ಅನುವಾದಕ್ಕೆ ಫೆಲೋಶಿಪ್; ಅರ್ಜಿ ಆಹ್ವಾನ

10-02-2025 ಬೆಂಗಳೂರು

ಬೆಂಗಳೂರು: ಬಹುವಚನ ಪ್ರಕಾಶನ ಮತ್ತು ನಾಟಕ ಕಂಪನಿ ತಮಾಶಾ ಸ್ಟುಡಿಯೋ ಫೌಂಡೇಶನ್ ಜಂಟಿಯಾಗಿ ಸ್ಥಾಪಿಸಿರುವ ನಾಟಕ ಅನುವಾದ ಫ...