Date: 18-09-2023
Location: ಕಾಸರಗೋಡು
ಕಾಸರಗೋಡು: ಯಲ್ಲಾಪುರ ತಾಲ್ಲೂಕು ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಖ್ಯಾತ ವ್ಯಂಗ್ಯ ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಸೀತಾರಾಮ ಹೆಗಡೆ (ನೀರ್ನಳ್ಳಿ ಗಣಪತಿ) ಯವರಿಗೆ 2023 ನೇ ಸಾಲಿನ ‘ಉಂಡೆಮನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವ್ಯಂಗ್ಯ ಚಿತ್ರಕಲಾವಿದರಾಗಿ ಬೆಳೆದು ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ರಾಮಕಥೆಯಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದ "ಕುಂಚಕವಿ"ಯಾಗಿ ಅರಳಿದ ನೀರ್ನಳ್ಳಿಯವರು ಗೀತರಾಮಾಯಣದ ಸರಣಿ ಕಾರ್ಯಕ್ರಮಗಳಲ್ಲೂ 'ಗೀತ-ಕುಂಚ' ಕಲಾವಿದರಾಗಿ ಹೆಸರು ಪಡೆದಿರುತ್ತಾರೆ. ಶಂಕರಾಚಾರ್ಯರ ಸ್ತೋತ್ರ ಗಾಯನ ಸಂದರ್ಭದಲ್ಲೂ ಭಾವಕ್ಕೆ ಅನುಗುಣವಾಗಿ ಚಿತ್ರ ರಚಿಸಿ ಯಶಸ್ವಿಯಾದ ಗರಿಮೆ ಇವರದ್ದಾಗಿದೆ. ಇವರ ವ್ಯಂಗ್ಯ ಚಿತ್ರಗಳು ನಾಡಿನ ಹಲವು ಪತ್ರಿಕೆಗಳಲ್ಲಿ ನಿಯತವಾಗಿ ಪ್ರಕಟವಾಗುತ್ತಿದ್ದುದು ಅವರ ಸಮಕಾಲೀನ ಆಗುಹೋಗುಗಳ ಬಗೆಗಿರುವ ಸ್ಪಂದನೆಗೆ ಇರುವ ಸಾಕ್ಷಿಗಳಾಗಿವೆ.
ಹುಬ್ಬಳ್ಳಿ: ನಾಡಿನ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಪ್ರತಿಷ್ಠಾಪನೆಗೊಂಡ ಡಾ. ಸಂಗಮೇಶ ಹಂಡಿಗಿ ಸ...
ಬೆಂಗಳೂರು: ಜ್ಯೋತಿ ನಿವಾಸ್ ಕಾಲೇಜು ಸ್ವಾಯತ್ತದಿಂದ ಕನ್ನಡ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ...
ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ. ಎಚ್.ಟಿ.ಪೋತೆ ಕಾವ್ಯ, ಕಥಾ ಪ್ರಶಸ್ತಿ ನೀಡಲು...
©2024 Book Brahma Private Limited.