Story/Poem

ಅಭಿಷೇಕ್‌ ಬಳೆ ಮಸರಕಲ್‌

ಯುವ ಬರಹಗಾರ ಕವಿ ಅಭಿಷೇಕ್‌ ಬಳೆ ಮಸರಕಲ್‌ ಜನಿಸಿದ್ದು 1994 ನ. 30ರಂದು. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್‌ ಗ್ರಾಮದವರು. ವಿಜ್ಞಾನ ಪದವೀಧರರು. ಹೈಸ್ಕೂಲ್ ನಲ್ಲಿರುವಾಗಲೇ ’ಕರ್ನಾಟಕ ಮಾತ” ಕವನ ಸಂಕಲನ ಪ್ರಕಟಿಸಿದ್ದರು. ಅಮ್ಮ ಮತ್ತು ಇತರೆ ಕವಿತೆಗಳು, ಗೋರಿ ಮೇಲಿನ ಹೂ ಇವರ ಪ್ರಮುಖ ಕೃತಿಗಳು. ಸಿರಿಗನ್ನಡ ವಚನ ಕಲ್ಯಾಣ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಕವನ ಕುಸುರಿ ಪ್ರಶಸ್ತಿ, ಯುವ ಬರಹಗಾರ ಪ್ರಶಂಸತಾ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.

More About Author

Story/Poem

ಈ ಸಂಜೆಯ ಬಯೋಡೇಟಾ

ದಿನ ಗೋಡೆಯ ಮೊಳೆಗೆ ಅಂಗಿ ಮತ್ತು ಪ್ಯಾಂಟ್ ನೇತಾಕುತ್ತಿದ್ದೆ ಇವತ್ತು ಅವುಗಳೊಂದಿಗೆ ಹೃದಯವನ್ನು ನೇತು ಹಾಕಿದೆ ಸೀದಾ ಬಚ್ಚಲಿಗೆ ಹೋದೆ ಕೈ ಕಾಲು ಮುಖ ತೊಳೆದುಕೊಂಡೆ ಮೈ ತೊಳೆದುಕೊಂಡಷ್ಟು ಸರಳ ಸುಲಭವಲ್ಲ ಮನಸ್ಸು ತೊಳೆದುಕೊಳ್ಳುವುದು ಅಮ್ಮ ಬಿಸಿಯಾದ ಚಹಾವನ್ನು ಮುಂದಿಟ್ಟ...

Read More...