Story/Poem

ಸುಚಿತ್ರಾ ಹೆಗಡೆ

ಲೇಖಕಿ ಸುಚಿತ್ರಾ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ, ಕುಮಟಾದ, ಕತಗಾಲ ಗ್ರಾಮದವರು. ತಾಯಿ ಶಾರದಾ ಭಟ್ ಮತ್ತು ತಂದೆ ಪಿ.ಆರ್ ಭಟ್ಟರು ಹೈಸ್ಕೂಲಲ್ಲಿ ಶಿಕ್ಷಕರಾಗಿದ್ದರು. ಕುಮಟಾದ ಬಾಳಿಗಾ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಅವರು ಕಮಲಾ ಬಾಳಿಗಾ ಕಾಲೇಜಿನಿಂದ ರ್ಯಾಂಕ್ ನೊಂದಿಗೆ ಬಿಎಡ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಹಾಗೆಯೇ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಮತ್ತೆ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಹಲವು ಕವನಗಳು ನಾಡಿನ ವಿವಿಧ ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಕಾಲೇಜು ದಿನಗಳಲ್ಲಿ ತುಷಾರ ಮಾಸಪತ್ರಿಕೆಯ ರಾಜ್ಯಮಟ್ಟದ ಕವನ ರಚನಾ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಗಳಿಕೆ ತೀರ್ಪುಗಾರರಾಗಿದ್ದವರು ಖ್ಯಾತ ವಿಮರ್ಶಕ ಶ್ರೀ ಜಿ ಎಸ್ ಆಮೂರ ಅವರು. ಇಪ್ಪತ್ತೆರಡು ವರುಷಗಳಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಮುಖ್ಯ ಶಿಕ್ಷಕಿ, ಪ್ರಾಂಶುಪಾಲೆ, ಆಂಗ್ಲ ವಿಭಾಗದ ಮುಖ್ಯಸ್ಥೆ ಮೊದಲಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಈಗ ಸ್ವಂತ ಉದ್ಯೋಗವನ್ನು ಆರಂಭಿಸಿದ್ದಾರೆ.

More About Author

Story/Poem

ದಂತಕಥೆ

ಏನಿಲ್ಲ ಚೆನ್ನಾಗಿಯೇ ಇತ್ತು ಆರೋಗ್ಯ ಎಕ್ಸರೇ ಬಿಟ್ಟು ಹುಡುಕಿದರು ದಂತಕ್ಷಯ! ನುರಿತ ಹಲ್ಲು ವೈದ್ಯರ ಸಮಿತಿ ಏರಿಸಿತು ಅಂದಾಜು ವೆಚ್ಚದ ಮಿತಿ ಕಟ್ಟುವೆವು ನಾವು ಹೊಸ ಸೆಟ್ಟು ಹಳದಿ ಹಲ್ಲುಗಳು ಸಂದು ಬಿಟ್ಟು ಅರಳುವ ನಗೆಯಲ್ಲಿ ಹೊಳಪಿಲ್ಲ ಹಳೆಯದ್ಯಾವುದೂ ನಮಗೆ ಸಲ್ಲ ಒಂಚೂರು ಜಾ...

Read More...