About the Author

ಸೂಕ್ಷ್ಮಪ್ರಜ್ಞೆಯುಳ್ಳ ಸಮಕಾಲೀನ ಯುವಕವಿ ಚಾಂದ್ ಪಾಷ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದವರು. 1994 ಮೇ 05ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, ಈಗ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ‘ಮೌನದ ಮಳೆ’ ಕವನ ಸಂಕಲನ(2015), ಧೂಳಿಡಿದ ನಕ್ಷತ್ರ ಎಂಬ ನಾಟಕ ಪ್ರಕಟವಾಗಿವೆ. ಇಟಲಿಯ ಪಿಯಾಸೆಂಜಾದಲ್ಲಿರುವ ಪಿಕ್ಕೋಲೋ ಮ್ಯುೂಸಿಯೊ ಡೆಲ್ಲಾ ಪೊಸಿಯಾ ದಲ್ಲಿ ಇವರ ಕವಿತೆಯೊಂದು ಪ್ರದರ್ಶನವಾಗಿದೆ. 

ಸಂಗಾತ ಪುಸ್ತಕ ಪ್ರಕಾಶನದ 2020ರ ಸಾಲಿನ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ, ಕುವೆಂಪು ಯುವ ಕವಿ ಪ್ರಶಸ್ತಿ, ಕಾವ್ಯ ಮನೆ ಕಾವ್ಯ ಪುರಸ್ಕಾರ, ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ನೇ ಸಾಲಿನ ಅವ್ವ ಪ್ರಶಸ್ತಿ ಲಭಿಸಿದೆ. 

ಚಾಂದ್ ಪಾಷ

(05 May 1994)