ಚಿತ್ರ ಚಿಗುರುವ ಹೊತ್ತು

Author : ಚಾಂದ್ ಪಾಷ

Pages 84

₹ 80.00




Year of Publication: 2020
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

‘ಚಿತ್ರ ಚಿಗುರುವ ಹೊತ್ತು’ ಚಾಂದ್ ಪಾಷ ಎನ್.ಎಸ್ ಅವರ ಕವನ ಸಂಕಲನ. ಸಂಗಾತ ಪ್ರಕಾಶನದಿಂದ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಪಡೆದು ಪ್ರಕಟವಾಗುತ್ತಿರುವ ಈ ಸಂಕಲನಕ್ಕೆ ಹಿರಿಯ ಸಾಹಿತಿ, ಚಿಂತಕ ನಟರಾಜ್ ಹುಳಿಯಾರ್ ಅವರು ಬೆನ್ನುಡಿ ಬರೆದಿದ್ದಾರೆ. ‘ಅವರ ವ್ಯಗ್ರ ಕಾವ್ಯ ಎಲ್ಲ ಧರ್ಮಗಳ ಕತ್ತಲನ್ನೂ ಸೀಳಲೆತ್ನಿಸುತ್ತಾ, ಸುತ್ತಣ ಕಾಯಿಲೆಗಳಿಗೆ ಉತ್ತರಕ್ಕಾಗಿ ತಡಕಾಡುತಿತ್ತು: ಭಾವಗೀತೆ, ಗದ್ಯಸ್ಫೋಟಗಳ ನಡುವೆ ಹೊಯ್ದಾಡುತ್ತಿತ್ತು, ಚಾಂದ್ ಪ್ರತಿಮೆಗಳಲ್ಲಿ ಚಂದ್ರ ಸೂರ್ಯರೂ ದಫನ್ ಆಗುವುದನ್ನು. ಸತ್ತ ಎದೆಯ ಮೇಲೆ ಕವಿತೆಯ ತುಕಡ ಅಡ್ಡಾಡುವುದನ್ನು, ಹಲಾಲ್ ಆಗದ ಪ್ರೇಮವನ್ನು ಕತ್ತರಿಸಿ ಎಸೆದ ಮಾಂಸದಂಗಡಿಗಳನ್ನು ಎಲ್ಲಾ ಕಾಲದ ಸೀತಾದಹನವನ್ನು ಕಂಡವರಿಗೆ ಗಂಭೀರ ಕವಿದನಿಯೊಂದು ಸ್ಪಷ್ಟವಾಗಿ ಕೇಳಿಸತೊಡಗುತ್ತದೆ’ ಎನ್ನುತ್ತಾರೆ ನಟರಾಜ್ ಹುಳಿಯಾರ್.

About the Author

ಚಾಂದ್ ಪಾಷ
(05 May 1994)

ಸೂಕ್ಷ್ಮಪ್ರಜ್ಞೆಯುಳ್ಳ ಸಮಕಾಲೀನ ಯುವಕವಿ ಚಾಂದ್ ಪಾಷ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದವರು. 1994 ಮೇ 05ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, ಈಗ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ‘ಮೌನದ ಮಳೆ’ ಕವನ ಸಂಕಲನ(2015), ಧೂಳಿಡಿದ ನಕ್ಷತ್ರ ಎಂಬ ನಾಟಕ ಪ್ರಕಟವಾಗಿವೆ. ಇಟಲಿಯ ಪಿಯಾಸೆಂಜಾದಲ್ಲಿರುವ ಪಿಕ್ಕೋಲೋ ಮ್ಯುೂಸಿಯೊ ಡೆಲ್ಲಾ ಪೊಸಿಯಾ ದಲ್ಲಿ ಇವರ ಕವಿತೆಯೊಂದು ಪ್ರದರ್ಶನವಾಗಿದೆ.  ಸಂಗಾತ ಪುಸ್ತಕ ಪ್ರಕಾಶನದ 2020ರ ಸಾಲಿನ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ, ಕುವೆಂಪು ಯುವ ಕವಿ ಪ್ರಶಸ್ತಿ, ಕಾವ್ಯ ಮನೆ ...

READ MORE

Related Books