About the Author

ಡಾ. ಜಿ.ವಿ.ಆನಂದಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆ ಮಜರೆ ಗ್ರಾಮದ ತಿಗಳರ ಗೊಲ್ಲಹಳ್ಳಿಯವರು.   ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ  ಶಿಕ್ಷಣ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ  (2005) ರಲ್ಲಿ ಪಿಎಚ್.ಡಿ ಪಡೆದರು. ಸಾಹಿತಿ-ಲೇಖಕರಾಗಿರುವ ಅವರು (1998-2001)ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. 

ಕೃತಿಗಳು: ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ). ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು -ಜನಪದ ತತ್ವಪದಗಳ ಸಂಗ್ರಹ), ಜಾನಪದದ ತುಂಬು ಹೊಳೆ (ಜನಪದ ಸಾಹಿತ್ಯ ಕುರಿತ ಕಿರು ಟಿಪ್ಪಣಿಗಳು), ಗಂಧರ್ವ ಲೋಕದ ಗೆಣೆಕಾರರು (ಜನಪದ ಕಲಾವಿದರನ್ನು ಕುರಿತ ಪರಿಚಯ ಲೇಖನಗಳು), ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ಅಭಿನಂದನ ಗ್ರಂಥ 'ನುಡಿ ಕನ್ನಡಿ' ಮತ್ತು ಅವರ ಕೃತಿಗಳ ವಿಮರ್ಶಾ ಗ್ರಂಥ 'ಕೃತಿ ಕನ್ನಡಿ' ಸಂಪಾದಿಸಿದ್ದಾರೆ. ಹರಿವ ಹೊಳೆ (ಕಾಳೇಗೌಡ ನಾಗವಾರ ಅವರ ಸಮಗ್ರ ಸಾಹಿತ್ಯ ಕುರಿತ ಸಂಶೋಧನಾ ಕೃತಿ).

ಜಿ.ವಿ. ಆನಂದಮೂರ್ತಿ