ಲೇಖಕ ಜಿ.ವಿ. ಆನಂದಮೂರ್ತಿ ಅವರ ಕಥಾ ಸಂಕಲನ- ಗುಣಸಾಗರಿ ಮತ್ತು ಇತರ ಕಥೆಗಳು. ಕತೆಗಾರರು ಸುಮಾರು ಹದಿನೇಳು ವರ್ಷಗಳ ಕಾಲ ಹೆಣೆದ ಹತ್ತು ಕತೆಗಳ ಸಂಕಲನ ಇದು. ಕೆಲವು ಕತೆಗಳು ಪ್ರಜಾವಾಣಿ, ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಣೆ ಕಂಡಿವೆ. ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಅವರು ಕೃತಿಯ ಕುರಿತು ‘ಈ ಕಥೆಗಳು ಆ ವಿಶಿಷ್ಟ ಉಪಸಂಸ್ಕೃತಿಯ ಹೊರಗಿನವರಿಗೆ ಮುಚ್ಚಿದ ಪುಸ್ತಕವಾಗುವುದಿಲ್ಲ. ವಿಶ್ವ ಹೃದಯದ ತಾಯಿನುಡಿಯಾದ ಮಹಾಕರುಣೆಯ ಮೂಲಕ ಕಥೆಗಾರ ಪಾತ್ರಗಳನ್ನು, ಕ್ಷೇತ್ರಗಳನ್ನು ಮುಟ್ಟಿ, ತಟ್ಟಿ, ತಡವಿ ಅವರವರ ಭಾಷೆಗಳಲ್ಲಿ ಮಾತಾಡಿಸಿದರೂ, ಅವು ನಮ್ಮೆಲ್ಲರ ಭಾಷೆಗೆ ತಂತಾವೆ ಅನುವಾದಿತಗೊಂಡು ಕಲಾಭಿವ್ಯಕ್ತಿ ಸಾಧಿಸುತ್ತದೆ. ಇದು ವರ್ತಮಾನದ ಕನ್ನಡ ಸಾಹಿತ್ಯದಲ್ಲಿ ಅಪರೂಪದ ಸಾಧನೆ; ಎಂದು ಪ್ರಶಂಸಿಸಿದ್ದಾರೆ.
ತುಮಕೂರು ಜಿಲ್ಲೆ ಬೆಳ್ಳಾವೆ ಮಜರೆ ಗ್ರಾಮ ತಿಗಳರ ಗೊಲ್ಲಹಳ್ಳಿಯವರಾದ ಡಾ. ಜಿ.ವಿ. ಅನಂದಮೂರ್ತಿ ಅವರು ಸಾಹಿತಿ-ಲೇಖಕರು. ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ (2005) ಪಡೆದರು. ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯ (1998-2001)ರಾಗಿದ್ದರು. ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ) ಪ್ರಕಟಿತ ಕೃತಿಗಳು. ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು (ಜನಪದ ತತ್ವಪದಗಳ ಸಂಗ್ರಹ), ...
READ MORE