ಮಡುಗಟ್ಟಿ ಅಕ್ಕರೆ

Author : ಜಿ.ವಿ. ಆನಂದಮೂರ್ತಿ

Pages 412

₹ 300.00




Year of Publication: 2006
Published by: ವಿಜಯಲಕ್ಷ್ಮೀ ಪ್ರಕಾಶನ
Address: #657,ಕೂಗುಬಂಡೆ ರಸ್ತೆ,ಇ ಮತ್ತು ಎಫ್‌ ಬ್ಲಾಕ್‌ ಕುವೆಂಪು ನಗರ, ಮೈಸೂರು-570023

Synopsys

‘ಮಡುಗಟ್ಟಿ ಅಕ್ಕರೆ ’ ಕಾಳೇಗೌಡ ನಾಗವಾರ ಅವರಿಗೆ ಸಲ್ಲಿಸಿದ ಗೌರವ ಗ್ರಂಥ. ಜಿ.ವಿ ಆನಂದಮೂರ್ತಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯವಾಹಿನಿಯ ದಿಕ್ಕುದೆಸೆಗಳನ್ನು ಗುಣಾತ್ಮಕವಾಗಿ ಬದಲಿಸಿದ ಚಳವಳಿಗಳ 'ಸಾಲಿನಲ್ಲಿ ಬಂಡಾಯಕ್ಕೆ ಮಹತ್ವಪೂರ್ಣಸ್ಥಾನವಿದೆ. ಇಂತಹ ಚಳವಳಿಗಳನ್ನು ಕಟ್ಟುವ ಸಂದರ್ಭದಲ್ಲಿನ ಸಾಂಸ್ಕೃತಿಕ ಏಳುಬೀಳುಗಳ ಸವಿವರ ಚಿತ್ರಣ ಇಲ್ಲಿನ ಬಹುಪಾಲು ಬರೆಹಗಳಲ್ಲಿ ದೊರೆಯುತ್ತದೆ. ಬಂಡಾಯ ಚಳವಳಿಯ ಚಾರಿತ್ರಿಕ ಔನ್ನತ್ಯವನ್ನು ಎತ್ತಿಹಿಡಿಯುವ ಸಂಬಂಧದಲ್ಲಿ ಕೂಡ ಇಲ್ಲಿನ ಬರಹಗಳು ಅತ್ಯಪೂರ್ವ ಮಾಹಿತಿಯನ್ನು ಒದಗಿಸಿಕೊಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಚಳವಳಿಗಳನ್ನು ಕಟ್ಟುವಾಗ, ಪ್ರಗತಿಪರ ಚಿಂತನೆಗಳನ್ನು ಬಿತ್ತುವಾಗ, ಜನಸಾಮಾನ್ಯರ ನಡುವೆ ಓಡಾಡುವಾಗ, ಸತ್ವಶೀಲ ವಿದ್ಯಾರ್ಥಿಪಡೆ ನಿರ್ಮಾಣ ಮಾಡುವಾಗ ಕಾಳೇಗೌಡರು ನಡೆದುಕೊಂಡ ರೀತಿ ಹಾಗೂ ಹಂಚುಂಡ ಪ್ರೀತಿ ಮತ್ತು ನಿರ್ಭೀತಿಯ ಅಮೃತಕ್ಷಣಗಳು ಇಲ್ಲಿ ಧಂಡಿಯಾಗಿ ಸಿಗುತ್ತವೆ. ಕಾಳೇಗೌಡ ನಾಗವಾರರ ತುಂಬು ಘನತೆಯ ವ್ಯಕ್ತಿತ್ವವನ್ನು ಕುರಿತ ಇಲ್ಲಿನ ಬರೆಹಗಳಲ್ಲಿ ಕಳೆದ ಮೂರು ದಶಕಗಳ ಅವಧಿಯ ಚಾರಿತ್ರಿಕ ಸ್ಥಿತ್ಯಂತರಗಳ ಅನನ್ಯಾವಲೋಕನವನ್ನು ನಾವು ಕಾಣಬಹುದು.

About the Author

ಜಿ.ವಿ. ಆನಂದಮೂರ್ತಿ

ಡಾ. ಜಿ.ವಿ.ಆನಂದಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆ ಮಜರೆ ಗ್ರಾಮದ ತಿಗಳರ ಗೊಲ್ಲಹಳ್ಳಿಯವರು.   ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ  ಶಿಕ್ಷಣ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ  (2005) ರಲ್ಲಿ ಪಿಎಚ್.ಡಿ ಪಡೆದರು. ಸಾಹಿತಿ-ಲೇಖಕರಾಗಿರುವ ಅವರು (1998-2001)ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು.  ಕೃತಿಗಳು: ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ). ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು -ಜನಪದ ತತ್ವಪದಗಳ ...

READ MORE

Related Books