ಬಸವರಾಜ ವಿಜಯಂ (ಭಾಗ-2)

Author : ಚನ್ನಪ್ಪ ಎರೇಸೀಮೆ

Pages 644

₹ 25.00




Year of Publication: 1982
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

Synopsys

‘ಮಹಾಕವಿ ಷಡಕ್ಷರಿದೇವ ವಿರಚಿತ ಬಸವರಾಜ ವಿಜಯಂ’ ಕೃತಿಯ ಭಾಗ-2ನ್ನು ಸರಳಗನ್ನಡಕ್ಕೆ ಪರಿವರ್ತಿಸಿದವರು ಪಂಡಿತ ಚನ್ನಪ್ಪ ಎರೇಸೀಮೆ. ಕಾವ್ಯ ಸತ್ವ ಹಾಗೂ ಗಾತ್ರದಲ್ಲೂ ಷಡಕ್ಷರಿಯ ಸಾಹಿತ್ಯ ಮಹತ್ವದ್ದು, ವೀರ, ಕರುಣ ಹಾಗೂ ಶೃಂಗಾರ ರಸಗಳನ್ನು ಮೇಳೈಸಿ ಕಥೆ ಹೇಳುವ ಕಲೆ ಷಡಕ್ಷರ ದೇವಗೆ ಸಿದ್ಧಿಸಿದೆ. ಕಥೆಯು ರಂಜಕವಾಗಲು, ಹೃದ್ಯವಾಗಲು ಯಾವ ಯಾವ ಪರಿಕರಗಳು ಬೇಕು ಎಂಬುದನ್ನು ಕವಿಗೆ ತಿಳಿದಿದೆ. ಸಾಹಿತ್ಯಕ ಕೃತಿ ಓದುತ್ತಿದ್ದಂತೆ ತಿಳಿಯುತ್ತದೆ. ಹಳೆಗನ್ನಡ ಕಾವ್ಯಗಳ ಅನುವಾದ ಮಾಲೆಯಡಿ ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿ ಪ್ರಕಟಿಸಿದೆ.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books