ವತ್ಸರಾಜನ ಕಥೆ

Author : ಎಸ್.ಜಿ. ನರಸಿಂಹಾಚಾರ್

Pages 203




Year of Publication: 1904
Published by: ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್
Address: ಮೈಸೂರು

Synopsys

ಚಿಂತಕ ಎಸ್. ಜಿ. ನರಸಿಂಹಾಚಾರ್ ಅವರು ರಚಿಸಿದ ಶ್ರೀ ಕೃಷ್ಣ ರಾಜಸೂಕ್ತಿ ಮುಕ್ತಾವಳಿ ಗ್ರಂಥದೊಳ್ ವತ್ಸರಾಜನ ಕಥೆ (ಪ್ರಥಮ ಭಾಗ, ಅಧ್ಯಾಯ 1ರಿಂದ 20) ಒಳಗೊಂಡ ಕೃತಿ ಇದು. ಕೃತಿಯಲ್ಲಿ ವತ್ಸರಾಜನ ದೇಶದ ವರ್ಣನೆ, ಯೌಗಂಧರಾಯಣನೆಂಬ ಮಂತ್ರಿ, ಕೌಶಾಂಬಿನಗರದ ವಿಕ್ರಮಬಾಹುರಾಯ, ರತ್ನಾವಳಿಯ ಮದುವೆ ಪ್ರಸ್ತಾವ, ಸಮುದ್ರದಲ್ಲಿ ಹಡಗು ಅಪಘಾತದಿಂದ ರತ್ನಾವಳಿ ಪಾರು, ಸಾಗರಿಕೆಯನ್ನು ಸೆರೆಮನೆಯಲ್ಲಿರಿಸಿದ ವೃತ್ತಾಂತ, ರತ್ನಾವಳಿಯ ಬಂಧ ವಿಮೋಚನೆ, ಸಿಂಹಳ ದೇಶಕ್ಕೆ ವತ್ಸರಾಜನ ಆಗಮನ ಹಾಗೂ ರತ್ನಾವಳಿಯ ಪಾಣಿಗ್ರಹಣ ಹೀಗೆ ವಿವಿಧ ಅಧ್ಯಾಯಗಳಡಿ ವತ್ಸರಾಜನ ಕಥೆಯನ್ನು 20 ಅಧ್ಯಾಯಗಳವರೆಗೆ ವಿವರಿಸಿದ ಕಥಾಕೃತಿ ಇದು.

About the Author

ಎಸ್.ಜಿ. ನರಸಿಂಹಾಚಾರ್
(11 September 1862 - 22 December 1907)

ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು.  ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು.  ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...

READ MORE

Related Books