ಬೆಳಗಾವಿ ಜಿಲ್ಲೆಯ ಜನಪದ ಕಲಾವಿದರು

Author : ಸಿ.ಕೆ ನಾವಲಗಿ

Pages 196

₹ 75.00




Year of Publication: 2012
Published by: ಕರ್ನಾಟಕ ಜಾನಪದ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಬೆಳಗಾವಿ ಜಿಲ್ಲೆಯ ಜಾನಪದ ಕಲಾವಿದ ಪರಿಚಯ ಈ ಕೃತಿಯಲ್ಲಿದೆ. ಲಾವಣಿ, ಗೀಗಿ, ಸೋಬಾನೆ, ರಿವಾಯತ್‌, ದೇಸಿ... ಹೀಗೆ ಜನಪದೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರ ಕುರಿತು ಈ ಕೃತಿಯು ಮಾಹಿತಿ ನೀಡುತ್ತದೆ. ಮುಖ್ಯವಾಗಿ ಲಾವಣಿ-ಗೀಗೀ ಕವಿ ಮತ್ತು ಹಾಡುಗಾರ ಭೀಮಕವಿ, ಗೀಗೀ ಗಾಯಕ ಚೆನ್ನಪ್ಪ ಚಿಂಚಲಿ, ಲಾವಣಿ-ಗೀಗೀ ಗಾಯಕ ಮತ್ತು ಕವ ಕಂದಭೀಮಕವಿ, ಗೀಗೀ ಪದ ಹಾಡುಗಾರ - ಕವಿ ಮತ್ತು ಕುಸ್ತಿಪೈಲ್ವಾನ ಮರಿಕಲ್ಲಪ್ಪ ಮಲಶೆಟ್ಟಿ, ಜನಪದ ಕವಿ-ಕಲಾವಿದ ಹೊಸೂರು ಸೋಮಲಿಂಗಪ್ಪ, ಜನಪದ ಕವಿ-ಕಲಾವಿದ ಮಲ್ಲನಗೌಡ ಪಾಟೀಲ, ಜನಪದ ಸಂಪ್ರದಾಯದ ಹಾಡುಗಳ ಕೋಗಿಲೆ ಭೀಮವ್ವ ಹರಿಜನ, ಸೋಬಾನ ಪದದ ಸಾವಿತ್ರೆವ್ವ ಗಡದೆ, ಜನಪದ ಹಾಡಗಾರ ಭೀಮಪ್ಪ ತೋಟಗಿ, ದೇಸೀ ಹಾಡಿನ ಸರದಾರ ಭೀಮಶೆಪ್ಪಶಾಸ್ತ್ರೀ, ಜನಪದ ಹಾಡುಗಾರ ಕಲಾವಿದ ಹೂವಪ್ಪ ಜಕಬಾಳ, ರಿವಾಯತ್‌ ಹಾಡುಗಾರ ಭೀಮಪ್ಪ ಮಾಯಣ್ಣವರ್ ಕುರಿತ ಮಾಹಿತಿ ಇಲ್ಲಿದೆ.

 ಭಜನೆ ಕಲಾವಿದರಾದ ಕಾದ್ರೊಳ್ಳಿ ಭಜನಾ ಪರಂಪರೆಯ ಕಲಾವಿದ ಭೀಮಪ್ಪ ತಳವಾರ, ಭಜನೆ ಕಲಾವಿದ ಲಖಮಗೌಡ ಪಾಟೀಲ, ರಾಮಚಂದ್ರಪ್ಪ ಮುಕ್ಕಣ್ಣವರಃ ಕೈವಲ್ಯ ಭಜನೆಯ ಹರಿಕಾರ, ಭಜನೆ ಕಲಾವಿದ ಈರಪ್ಪ ಸಿಂಗಮ್ಮನವರ ಮಾಹಿತಿ ಹಾಗೆಯೇ ಚೌಡಿಕೆ ಕಲಾವಿದರ ಮಾಹಿತಿ, ಡೊಳ್ಳು ಕಲಾವಿದರು, ಜನಪದ ವಾದ್ಯ ವಾದನ ಕಲಾವಿದರು, ಡಪ್ಪನಾಟ, ಸಣ್ಣಾಟದ ಕಲಾವಿದರು ಹಾಗೂ ಶ್ರೀ ಕೃಷ್ಣ ಪಾರಿಜಾತ ರಂಗ ಕಲಾವಿದರ ಪರಿಚಯ ಕೃತಿಯಲ್ಲಿ ಒಳಗೊಂಡಿದೆ. 

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books