ಭೂಮಿ ನಂತರ ನಮ್ಮ ನೆಲೆ ಎಲ್ಲಿ?

Author : ಎಂ.ಎಲ್. ರಾಘವೇಂದ್ರರಾವ್‌

Pages 134

₹ 60.00




Year of Publication: 2011
Published by: ಮಧುರ ಪ್ರಕಾಶನ
Address: ಬೆಂಗಳೂರು

Synopsys

ಲೇಖಕರಾದ ಶ್ರೀನಿವಾಸ ಚಕ್ರವರ್ತಿ ಹಾಗೂ ಎಂ.ಎಲ್. ರಾಘವೇಂದ್ರ ರಾವ್ ಅವರು ಜಂಟಿಯಾಗಿ ರಚಿಸಿದ ಕೃತಿ-ಭೂಮಿ ನಂತರ ನಮ್ಮ ನೆಲೆ ಎಲ್ಲಿ?. ಇದು ಮನುಕುಲಕ್ಕೆ ಕಾಡುತ್ತಿರುವ ಪ್ರಶ್ನೆ ಎಂಬುದಾಗಿ ಲೇಖಕರು ಈ ಕೃತಿಗೆ ಉಪಶೀರ್ಷಿಕೆ ನೀಡಿದ್ದು, ಭೂಮಿಯನ್ನು ಎಷ್ಟು ಸಾಧ್ಯವೋ ಅಷ್ಟನ್ನೂ ದುರುಪಯೋಗಪಡಿಸಿಕೊಂಡಿರುವ ಎಲ್ಲ ಚಿತ್ರಣಗಳನ್ನು ನೀಡುವ ಮೂಲಕ, ಬದುಕಲು ಭೂಮಿಯನ್ನು ಅಯೋಗ್ಯವಾಗಿಸಿದ ಮೇಲೆ ಮತ್ತೆಲ್ಲಿ ಹೊರಡುವುದು ಎಂಬ ಪ್ರಶ್ನೆಯು ಪರಿಸರ ವಿನಾಶದ ಎಚ್ಚರಿಕೆಯನ್ನು ನೀಡಿದ್ದಾರೆ. ಭೂಮಿಯ ವಿನಾಶ ಮಾತ್ರವಲ್ಲ; ಇಡೀ ಮನುಕುಲದ ನಾಶವೇ ಎಂದು ಲೇಖಕರು ಅರ್ಥೈಸಿದ್ದಾರೆ.  ಇರುವ ಭೂಮಿಯನ್ನು ಸ್ವಚ್ಛವಾಗಿರಿಸಿಕೊಂಡು ಮನುಕುಲದ ವಿನಾಶ ತಡೆಯಬಹುದೆಂದೂ ಇಲ್ಲಿಯ ವಿಚಾರಗಳು ಓದುಗರನ್ನು ಎಚ್ಚರಿಸುತ್ತವೆ. 

About the Author

ಎಂ.ಎಲ್. ರಾಘವೇಂದ್ರರಾವ್‌
(20 December 1942)

ಹಿರಿಯ ಸಾಹಿತಿ, ಪ್ರಕಾಶಕರಾಗಿಯೂ ಪರಿಚಿತರಾಗಿದ್ದ ರಾಘವೇಂದ್ರರಾವ್‌ ಅವರು 1942 ಡಿಸೆಂಬರ್‌ 20ರಂದು ಮೈಸೂರಿನಲ್ಲಿ ಜನಿಸಿದರು.  ತಾಯಿ ಅನಸೂಯಾಬಾಯಿ. ತಂದೆ ಲಕ್ಷ್ಮಣರಾವ್‌. ಇವರು ರಚಿಸಿದ ಕತೆಗಳು ಮೊದಲು ಪ್ರಕಟವಾಗಿದ್ದ ಜನಪ್ರಗತಿ ಹಾಗೂ ಮಲ್ಲಿಗೆ ಪತ್ರಿಕೆಗಳಲ್ಲಿ. ಮುರಳಿ ಎಂಬ ಮಾಸ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಧೃವ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಧುರ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ ಇವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ತೆಲುಗಿನ ಯಂಡಮೂರಿ ವೀರೇಂದ್ರನಾಥ್‌, ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್‌, ಸೂರ್ಯದೇವರ ರಾಮಮೋಹನ ರಾವ್‌, ಮಾಲತಿ ಚೆಂಡೂರ್‌ ಸೇರಿದಂತೆ ಹಲವಾರು ಲೇಖಕರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ...

READ MORE

Related Books