ಗಾಂಧೀಜಿಯ ರಾಜಕೀಯ ಪತ್ರಗಳು

Author : ಸಿದ್ದವನಹಳ್ಳಿ ಕೃಷ್ಣಶರ್ಮ

Pages 180

₹ 2.00




Year of Publication: 1952
Published by: ಮಿಂಚಿನ ಚಾವಡಿ
Address: ಧಾರವಾಡ

Synopsys

ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಗಾಂಧೀಜಿ ಅವರೊಂದಿಗೆ ವ್ಯವಹರಿಸಿದ ಪತ್ರಗಳ ಸಾಹಿತ್ಯದ ಕೃತಿ ಇದು-ಗಾಂಧೀಜಿಯವರ ರಾಜಕೀಯ ಪತ್ರಗಳು. 1947ರಲ್ಲಿ ಮೊದಲ ಮುದ್ರಣ ಕಂಡಿದೆ. ಈಗಿನದು ದ್ವಿತೀಯ ಮುದ್ರಣ. ಗಾಂಧೀಜಿ ಅವರ ರಾಜಕಾರಣವು ಗಹನವಾಗಿದೆ. ವೀರಚರಿತೆಯಾಗಿದೆ. ಅವರು ಭಾರತೀಯ ನೈಜ ಕ್ರಾಂತಿಕಾರರು. ಶತ್ರುವಿಗೆ ಮರ್ಮ ಆಘಾತವನ್ನುಂಟು ಮಾಡುವ ಅವರ ನಿಪುಣತೆ, ಅವರನ್ನು ಮೂದಲಿಸುವ ರೀತಿ ಜನರನ್ನು ಬೆರಗುಗೊಳಿಸುತ್ತದೆ. ನಿದ್ದೆಯಲ್ಲಿದ್ದ ಭಾರತವನ್ನು ಬಡಿದೆಬ್ಬಿಸಿದವರು. ಎಷ್ಟು ಅಧ್ಯಯನ ಮಾಡಿದರೂ ಇವರ ವ್ಯಕ್ತಿತ್ವ ಹಿಗ್ಗುತ್ತದೆ. ಒಬ್ಬ ನಾಯಕನಾಗಿ ಅವರು ದೇಶದ ಸ್ವಾತಂತ್ಯ್ರಕ್ಕಾಗಿ ವಿದೇಶಿಗಳಿಗೆ ಬರೆದ ಪತ್ರಗಳು, ತಾವು ಹಮ್ಮಿಕೊಂಡ ಚಳವಳಿಗಳ ಬಗ್ಗೆ, ಶಾಸನ ಉಲ್ಲಂಘಿಸುತ್ತಿರುವ ಬಗ್ಗೆ, ವಾಕ್ ಸ್ವಾತಂತ್ಯ್ರದ ಸತ್ಯಾಗ್ರಹ ಬಗ್ಗೆ ಅಸಂಖ್ಯ ಪತ್ರಗಳನ್ನು ಬರೆದಿದ್ದರು. ಅವುಗಳ ಸಂಗ್ರಹರೂಪವೇ ಈ ಕೃತಿ. ದೇಶದ ಸ್ವಾತಂತ್ಯ್ರ-ಹೋರಾಟ, ಬ್ರಿಟಿಷರ ಆಡಳಿತ, ಜಾಗತಿಕ ನೋಟ ಇತ್ಯಾದಿ ಅಂಶಗಳನ್ನು ಇಲ್ಲಿ ಕಾಣಬಹುದು.

About the Author

ಸಿದ್ದವನಹಳ್ಳಿ ಕೃಷ್ಣಶರ್ಮ
(31 July 1904 - 02 October 1973)

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...

READ MORE

Related Books