ಕರಾವಳಿ ಕರ್ನಾಟಕದ ಪತ್ರಸಾಹಿತ್ಯ

Author : ನರೇಂದ್ರ ರೈ ದೇರ್ಲ

Pages 80

₹ 100.00




Year of Publication: 2022
Published by: ಕನಸು ಪ್ರಕಾಶನ
Address: ಮಾಡಾವು ಪೋಸ್ಟ್, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
Phone: 9164561789

Synopsys

ಲೇಖಕ ನರೇಂದ್ರ ರೈ ದೇರ್ಲ ಅವರ ಕೃತಿ ಕರಾವಳಿ ಕರ್ನಾಟಕದ ಪತ್ರಸಾಹಿತ್ಯ. "ಪೆನ್ನಿನ ತುದಿಗೆ ಬೆಳಕು ಬಿದ್ದಾಗ ಅಕ್ಷರ- ಸಾಹಿತ್ಯ"- ಎಂದವರು ನಾಟಕಕಾರ ಶ್ರೀರಂಗರು. ಈಗ ಕಾಲ ಬದಲಾಗಿದೆ. ಬೆರಳಿನ ತುದಿಗೆ ಬೆಳಕು ಬಿದ್ದಾಗ ಮೊಬೈಲ್ನಲ್ಲಿ ಅಕ್ಷರ- ಸಾಹಿತ್ಯ ಸೃಷ್ಟಿಯಾಗುತ್ತಿದೆ .ಜಗತ್ತಿನ ಕೊನೆಯ ಪುಸ್ತಕ ,ಕಾಗದರಹಿತ ಪುಸ್ತಕ ಮಕ್ಕಳ ಕೈಯಲ್ಲಿದೆ . ಕೈಬರಹ, ಪತ್ರ ಇವೆಲ್ಲ ನಿಧಾನವಾಗಿ ಅಟ್ಟಕ್ಕೆ ಸೇರುತ್ತಿವೆ.ನೂರಾರು ವರ್ಷ ಕಾಗದ ಈ ಜಗತ್ತನ್ನ ಆಳಿತ್ತು .ಶಿಲೆ, ತಾಳೆಗರಿ, ತಾಮ್ರಪಟ, ಕಾಗದ ಎಲ್ಲವೂ ತೆರೆಗೆ ಸರಿದು ಯಂತ್ರದ ದಾರಿಯಲ್ಲಿ ಅರಿವು ಸಾಗುವ ದಿನಮಾನದಲ್ಲಿ ಕೈಬರಹ ಪತ್ರ ಸಾಹಿತ್ಯದ ಬಗ್ಗೆ ನಾನೊಂದು ಪುಟ್ಟ ಪುಸ್ತಕ ಬರೆದಿದ್ದೇನೆ. ಅದೇ' ಕರಾವಳಿ ಕರ್ನಾಟಕದ ಪತ್ರ ಸಾಹಿತ್ಯ'. ಪತ್ರಗಳು ಒಂದು ಕಾಲದ ಸತ್ಯ, ಮನೋಇಂಗಿತ. ಪತ್ರಗಳನ್ನು ಯಾರು ಯಾರಿಗೆ ಬರೆಯಲಿ ಅದಕ್ಕೊಂದು ಭಾಷೆ ಉದ್ದೇಶ ಪರಿಣಾಮ ಇದ್ದೇ ಇದ್ದೇ ಇರುತ್ತದೆ. ಕೈಬರಹ ಮನುಷ್ಯನ ಭಾವನೆ ಸಂವೇದನೆಗಳನ್ನು ಭಿನ್ನ-ಭಿನ್ನವಾಗಿ ಅಭಿವ್ಯಕ್ತಿಸುತ್ತದೆ. ಅದರ ಮುದ್ರಿತ ರೂಪ ಅಂತಹ ಸೂಕ್ಷ್ಮತೆಯನ್ನು ಕಳಚಿ ಏಕರೂಪ ಗೊಳಿಸುತ್ತದೆ. ಇಂಥ ಪತ್ರಗಳನ್ನು ಸಾಹಿತ್ಯ ಎಂದು ಪರಿಗಣಿಸಬೇಕೇ? ಕಳೆದು ಹೋದ ಪತ್ರಗಳು ಅವು ಹೊಂದಿರುವ ವಿಷಯ ಚರ್ಚೆ ವಾಗ್ವಾದಗಳಿಂದ ವರ್ತಮಾನಕ್ಕೆ ಏನು ಪ್ರಯೋಜನ? ಪತ್ರಗಳಲ್ಲಿರುವ ಸಾಹಿತ್ಯ ಸಾಂಸ್ಕೃತಿಕ ಮಾನವೀಯ ಮೌಲ್ಯಗಳೇನು? ಇವುಗಳನ್ನು ಈಗ ಪ್ರಕಟಿಸಿ ಇನ್ಯಾರೋ ಓದುವುದರಿಂದ ಅವುಗಳ ನಿರ್ಧರಿತ ಖಾಸಗಿತನಗಳು ಬಹಿರಂಗವಾಗುವುದಿಲ್ಲವೇ? ಬರೆದವರು- ಪಡೆದವನು ಇಲ್ಲವ ಎಂಬ ಮಾತುಗಳು ಈ ಕೃತಿಯಲ್ಲಿದೆ.

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Related Books