ಅರುಣ್ ಜೋಳದಕೂಡ್ಲಿಗಿ ಅವರ ಸಂಶೋಧನಾ ಕೃತಿ ‘ಗಂಟಿಚೋರ್ ಸಮುದಾಯ’. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಡಿಯಲ್ಲಿ ಪರಿಶಿಷ್ಟ ಜಾತಿ ವರ್ಗದ ಅಲೆಮಾರಿ, ಅರೆಅಲೆಮಾರ, ಸೂಕ್ಷ್ಮ ಮತ್ತುಅತಿಸೂಕ್ಷ್ಮ ಸಮುದಾಯಗಳ ಅಧ್ಯಯನದ ಪೈಕಿ ‘ಗಂಟಿಚೋರ್ ಸಮುದಾಯ’ ಅಧ್ಯಯನ ಬಹು ಮುಖ್ಯದ್ದಾಗಿದೆ. ಅಪರಾಧಿಬುಡಕಟ್ಟೆಂದು ಹಣೆಪಟ್ಟಿ ಹೊತ್ತಿರುವ ಈ ಸಮುದಾಯದ ಪ್ರಮುಖ ನೆಲೆಯ ಶೋಧವೇ ಈ ಅಧ್ಯಯನ ಕೃತಿ. ಉತ್ತರ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದ್ದು, ಬಹುರೂಪದಲ್ಲಿ ಸಮಾನಾಂತರ ಹೆಸರಿನೊಂದಿಗೆ ನೆಲೆಸಿದೆ. ಇವರ ಬದುಕು, ದುಡಿಮೆ ಸೇರಿದಂತೆ ಸಂಪೂರ್ಣ ಚಿತ್ರಣ ಈ ಕೃತಿಯಿಂದ ಲಭ್ಯವಿದೆ.
©2024 Book Brahma Private Limited.