ಕಲ್ಯಾಣ ಚಾಲುಕ್ಯ ಶಿಲ್ಪಕಲೆ

Author : ಕರುಣಾ ವಿಜಯೇಂದ್ರ

Pages 128

₹ 35.00




Year of Publication: 2008
Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

‘ಕಲ್ಯಾಣ ಚಾಲುಕ್ಯ ಶಿಲ್ಪಕಲೆ’ ನೃತ್ಯ ಇತಿಹಾಸ ತಜ್ಞೆ ಕರುಣಾ ವಿಜಯೇಂದ್ರ ಅವರು ರಚಿಸಿರುವ ಕೃತಿ. ಹಿರಿಯ ಲೇಖಕರಾದ ಎಚ್. ಎಸ್. ಗೋಪಾಲ ರಾವ್ ಅವರು ಈ ಕೃತಿಯ ಸಂಪಾದಕರಾಗಿದ್ದಾರೆ. ಕೃತಿಯಲ್ಲಿ ಕಲ್ಯಾಣ ಚಾಲುಕ್ಯರ ರಾಜಕೀಯ ಇತಿಹಾಸ, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು, ಶಿಲೆ ಮತ್ತು ಸ್ವರೂಪ, ದೇವಾಲಯಗಳಲ್ಲಿನ ಶಿಲ್ಪಗಳು, ಶಿಲ್ಪಗಳ ವೈಶಿಷ್ಟ್ಯ, ಸ್ಮಾರಕ ಶಿಲ್ಪಗಳು, ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಗಳು, ಸೇರಿದಂತೆ ಕಲ್ಯಾಣ ಚಾಲುಕ್ಯರ ಕಾಲಘಟ್ಟದ ಕಲಾ ಇತಿಹಾಸವನ್ನು ವಿವರಿಸುವ ಹಲವಾರು ಲೇಖನಗಳಿವೆ.

About the Author

ಕರುಣಾ ವಿಜಯೇಂದ್ರ

ಲೇಖಕಿ ಕರುಣಾ ವಿಜಯೇಂದ್ರ ಅವರು ನೃತ್ಯ ತಜ್ಞರು. ನೃತ್ಯಕ್ಕೆ ಸಂಬಂಧಿಸಿದ ಹಲವರು ಕೃತಿಗಳನ್ನು ರಚಿಸಿದ್ದಾರೆ. ನೃತ್ಯ ಕಲೆಯ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ನೃತ್ಯ ಮತ್ತು ಕಲಾ ಇತಿಹಾಸದ ಬಗ್ಗೆ ಹಲವಾರು ಸಂಕಿರಣಗಳನ್ನು ನಡೆಸಿದ್ದಾರೆ. ಕಲ್ಯಾಣ ಚಾಲುಕ್ಯ ಶಿಲ್ಪಕಲೆ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books