ಮಹಾಭಾರತದ ಜೀವನ ಸಂದೇಶ

Author : ಚಂದ್ರಕಾಂತ್‌ ಕೆ .ಎಸ್‌

Pages 82

₹ 125.00




Year of Publication: 2023
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

'ಮಹಾಭಾರತದ ಜೀವನ ಸಂದೇಶ' ಚಂದ್ರಕಾಂತ್‌ ಅವರ ವಿಶ್ಲೇಷಣೆಯ ಕೃತಿಯಾಗಿದೆ. ಭಾರತೀಯ ಸಾಹಿತ್ಯ ಪ್ರಪಂಚವಂತೂ ಮಹಾಭಾರತವನ್ನು ಪುನಃ ಪುನಃ ಸೃಷ್ಟಿಸುತ್ತಲೇ ಸಾಗಿದೆ. ಅನುವಾದ, ಅದರ ಕಥೆಗಳನ್ನು ಆಧರಿಸಿದ ಕಥೆ-ಕವನ-ನಾಟಕ- ಕಾದಂಬರಿಗಳು, ವಿಮರ್ಶಾತ್ಮಕ ಕೃತಿಗಳು ಹೀಗೆ ಭಿನ್ನ-ವಿಭಿನ್ನವಾಗಿ ಮಹಾಭಾರತ ಭಾರತೀಯ ಸಾಹಿತ್ಯವನ್ನು ಇಂದಿಗೂ ತುಂಬುತ್ತಲೇ ಇದೆ. ಅಂಥದ್ದೊಂದು ಹೊಸ ಕೃತಿ ಇದೀಗ ನಮ್ಮ ಓದಿಗೆ ಸಿಕ್ಕಿದೆ. ಡಾ.ಚಂದ್ರಕಾಂತ ಅವರು ಮಹಾಭಾರತವನ್ನು ನೋಡುವ ಬಗೆಯೊಂದನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ.ಅತಿ ಅಪರೂಪವಾದ, ಅತಿ ಅಗತ್ಯವೂ ಎನ್ನುವಂತಿರುವ ಈ ಕೃತಿ ನನಗಂತೂ ತುಂಬಾ ಖುಷಿ ನೀಡಿದೆ. ನನ್ನನ್ನೂ ಮಹಾಭಾರತದ ಬಗ್ಗೆ ಇನ್ನಷ್ಟು ಅಲಿಯಲು ಪ್ರೇರಣೆ ನೀಡಿದೆ. ಮಥಿಸಲು ಅವಕಾಶ ಒದಗಿಸಿದೆ. ನನ್ನೊಬ್ಬ ವಿದ್ಯಾರ್ಥಿ ಇಂಥ ಅಸದೃಶ ಎನ್ನಿಸುವಂಥ, ಅನೂಹ್ಯ ಕೃತಿ ಬರೆದಿದ್ದಾನೆ ಎಂಬುದು ನಿಜಕ್ಕೂ ನನ್ನನ್ನು ಪುಳಕಿತನನ್ನಾಗಿಸಿದೆ. ನಾನು ಮಹಾಭಾರತದ ಒಳನೋಟವನ್ನು ಇನ್ನೊಂದಿಷ್ಟು ಅಲಿಯಲು ನನ್ನ ಶಿಷ್ಯ ನನಗೆ ಗುರುವಾಗಿದ್ದಾನೆ ಎನ್ನುತ್ತಾರೆ ಟಿ. ಎಂ. ಸುಬ್ಬರಾಯ.

About the Author

ಚಂದ್ರಕಾಂತ್‌ ಕೆ .ಎಸ್‌

ವೃತ್ತಿಯಲ್ಲಿ ವೈದ್ಯ, ಡಾ. ಕೆ.ಎಸ್. ಚಂದ್ರಕಾಂತ್ ಅವರು ಪ್ರಸ್ತುತ ಬೆಂಗಳೂರಿನ ದಾಸರಹಳ್ಳಿಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದಾರೆ. ಅವರು MBBS, DMRD, DNB, ಮತ್ತು FRCR ಅನೇಕ ಪದವಿಗಳನ್ನು ಹೊಂದಿದ್ದಾರೆ .ಅವರು 20 ವರ್ಷಗಳಿಂದ ರೇಡಿಯಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದು, ಸಾಹಿತ್ಯಾಸಕ್ತಿಯನ್ನು ಹೊಂದಿದ್ದಾರೆ.  ಕೃತಿಗಳು: ಮಹಾಭಾರತದ ಜೀವನ ಸಂದೇಶ ...

READ MORE

Related Books