ರೈತರ ಆತ್ಮಹತ್ಯೆ ಒಂದು ಮನೋವೈಜ್ಞಾನಿಕ ವಿಶ್ಲೇಷಣೆ

Author : ಎ.ಎಸ್. ಕುಮಾರಸ್ವಾಮಿ

Pages 183

₹ 130.00




Year of Publication: 2016
Published by: ಸಪ್ನ ಬುಕ್‌ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಕೃಷಿ ಆಧಾರಿತ ದೇಶ ಭಾರತ. ಕೃಷಿಯನ್ನೇ ನಂಬಿ ಬದುಕು ನಡೆಸುವ ಕುಟುಂಬದವರ ಪಾಡು ಕೇಳುವರಿಲ್ಲ ಎನ್ನುವಂತಾಗಿದೆ. ಕಳೆದ 15 ವರ್ಷಗಳಲ್ಲಿ ಭಾರತದಲ್ಲಿ ಸುಮಾರು ಒಂದು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಕಾರಣ ಏನು,  ಸಮಗ್ರ ಕೃಷಿ ನೀತಿ ಎಂದರೇನು ಎಂಬುದರ ಕುರಿತು ಚರ್ಚೆ ಈ ಕೃತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಪ್ರಕ್ರಿಯೆಯ ಒಂದು ವಿಶ್ಲೇಷಣೆ, ಜನಸಾಮಾನ್ಯರ ಆತ್ಮಹತ್ಯೆ - ಅಂಕಿ ಅಂಶಗಳು ತಿಳಿಸುವುದೇನು?, ರೈತರ ಆತ್ಮಹತ್ಯೆ- ಒಂದು ವಿಶೇಷ ಪರಿಗಣನೆ, ರೈತರ ಆತ್ಮಹತ್ಯೆ - ಅಂಕಿ ಅಂಶಗಳ ಮೇಲೆ ಒಂದು ಕ್ಷಕಿರಣ, ಆತ್ಮಹತ್ಯೆಯು ಒಂದು ಸರಿಪಡಿಸಬಹುದಾದ ಮನೋವೈಜ್ಮಾನಿಕ ಸಮಸ್ಯೆ, ಆತ್ಮಹತ್ಯೆ ತಡೆಯ ಸಾಮಾಜಿಕ, ಸಾಮೂಹಿಕ ಪ್ರಯತ್ನಗಳು, ಆತ್ಮಹತ್ಯೆ ಪ್ರರಕರಣಗಳನ್ನು ವರದಿ ಮಾಡಬೇಕಾದರೆ ಮಾಧ್ಯಮದವರು ವಹಿಸಬೇಕಾದ ಎಚ್ಚರಿಕೆಗಳು, ಆತ್ಯಹತ್ಯೆ ಸಂತ್ರಸ್ತ ನಿರ್ಗತಿಕ ಕುಟುಂಬಗಳಿಗೆ ಪರಿಹಾರ ಮತ್ತು ಮರುನೆಲೆ, ಕೃಷಿಕರ ಆತ್ಮಹತ್ಯೆಗಳು ಕೃಷಿ ವ್ಯವಸ್ಥೆಯ ದುರ್ಬಲ ಆರ್ಥಿಕತೆಗೆ ಹಿಡಿದ ಕನ್ನಡಿಯೇ? ಮುಂತಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ಈ ಕೃತಿಯಲ್ಲಿದೆ.

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books