ಸಂಸ್ಕೃತಕ್ಕಾಗಿ ಹೋರಾಟ

Author : ವಿ. ಕೃಷ್ಣ

Pages 552

₹ 400.00




Year of Publication: 2017
Published by: ವಸಂತ ಪ್ರಕಾಶನ
Address: ವಸಂತ ಪ್ರಕಾಶನ, 3ನೇ ಬ್ಲಾಕ್ ಜಯನಗರ, ಬೆಂಗಳೂರು

Synopsys

ನಮ್ಮ ಚರ್ಚೆಗಳು ಚರ್ಚೆಗಳಾಗದೆ ಅಭಿಪ್ರಾಯ ಹೇರಿಕೆಗಳಾಗಿ ಪರಿವರ್ತನೆಗೊಂಡಿದೆ.ಈ ಕಾರಣಕ್ಕೆ ಚರ್ಚೆಗಳ ಜಾಗದಲ್ಲಿ ತೀರ್ಪುಗಳೇ ಹೆಚ್ಚು ಕಾಣಿಸಿಗುತ್ತದೆ.ನಮ್ಮ ಓದು, ಅಧ್ಯಯನ, ತಿಳಿವಿನ ಮಟ್ಟವನ್ನು ಬೇರೆ ಇನ್ನಾರೋ ನಿಯಂತ್ರಿಸುತ್ತಿದ್ದಾರೆ ಎಂಬ ಅನುಮಾನ ಮೂಡಿಬರುತ್ತದೆ.ಸಂಸ್ಕೃತ ಭಾಷೆಯ ಬಗ್ಗೆ ಜನಸಮಾನ್ಯರಲ್ಲಿ ನಡೆಯುವ ಚರ್ಚೆ ಆರೋಗ್ಯಕರವಾಗಿಲ್ಲ. ಸಂಸ್ಕೃತವನ್ನು ದೇವಭಾಷೆಯೆಂದು ಕೆಲವರು ಕೈಮುಗಿದು ಭಕ್ತಿಭಾವ ಮೆರೆದರೆ, ಅದನ್ನು ಪುರೋಹಿತಶಾಹಿಯ ಅಸ್ತವೆಂಬಂತೆ ನೋಡುವಗುಂಪು ಇನ್ನೊಂದು ಕಡೆ.ಸಂಸ್ಕೃತ ಭಾಷೆ ಎದುರಿಸುವ ಸಮಸ್ಯಗಳು,ಭಾಷೆಯ ಅಭಿವೃದ್ದಿಯಗೆ ಬೇಕಾದ ಕೆಲವು ಪೂರಕ ಮಾಹಿತಿ “ಸಂಸ್ಕೃತಕ್ಕಾಗಿ ಹೋರಾಟ' ಈ ಪುಸ್ತಕದಲ್ಲಿದೆ.ಈ ಕೃತಿಯಲ್ಲಿ 11 ಅಧ್ಯಾಯಗಳಿವೆ.

About the Author

ವಿ. ಕೃಷ್ಣ

ಹಿರಿಯ ಅನುವಾದಕ ವಿ.ಕೃಷ್ಣ ಅವರು 1950ರಲ್ಲಿ ಜನಿಸಿದರು. ಬಿ.ಕಾಂ. ಪದವೀಧರರು. ಹಲವಾರು ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಕನ್ನಡ ಹಾಗೂ ಭಾಷಾವಿಜ್ಞಾನದಲ್ಲಿ ಆಸಕ್ತಿವುಳ್ಳವರು. ತಮ್ಮ 35 ವರ್ಷಗಳ ಅಧ್ಯಯನದ ಫಲವಾಗಿ ಮೂರು ಸಂಪುಟಗಳಲ್ಲಿ 4750 ಪುಟಗಳಲ್ಲಿ ಹರಡಿಕೊಂಡಿರುವ 1.60.000 ಪದಗಳ ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ರೂಪಿಸಿದ್ದಾರೆ. ಇದು ಅಪರೂಪದ ಸಾಹಸಗಾಥೆ. ಕನಕದಾಸರ ಕೀರ್ತನೆಗಳ ‘ಶಬ್ಧಪ್ರಯೋಗಕೋಶ’ವನ್ನೂ ಪ್ರಕಟಿಸಿದ್ದಾರೆ. ಸಂಗೀತಶಾಸ್ತ್ರ, ಸಸ್ಯಶಾಸ್ತ್ರ, ಕಲೆ, ವಿಜ್ಞಾನ ಕ್ಷೇತ್ರದಲ್ಲೂ ಸಾಹಿತ್ಯ ಕೃಷಿ ಮಾಡಿದ್ದು, ಕುವೆಂಪು ಭಾಷಾಭಾರತಿಗಾಗಿ ಹಲವಾರು ಪುಸ್ತಕಗಳು, ಲೇಖನಗಳ ಅನುವಾದ, ಕಾಪಿ ಎಡಿಟಿಂಗ್ ಗಳನ್ನು ಸಹ ಮಾಡಿದ್ದಾರೆ. ಡಾ. ಅಂಬೇಡ್ಕರ್ ಸರಣಿ ಬರೆಹಗಳು, ದೀನದಯಾಳ್ ಉಪಾಧ್ಯಾಯ ...

READ MORE

Related Books