ಸೋಮಶೇಖರ ಇಮ್ರಾಪುರಗೆ ಅಂಬಿಕಾತನಯದತ್ತ ಪ್ರಶಸ್ತಿ


ವರಕವಿ ಜನ್ಮದಿನದ ಅಂಗವಾಗಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ ವಾರ್ಷಿಕವಾಗಿ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಜಾನಪದ ತಜ್ಞ, ಕವಿ ಡಾ. ಸೋಮಶೇಖರ ಇಮ್ರಾಪುರ ಆಯ್ಕೆಯಾಗಿದ್ದು, ಜ. 31ರಂದು ಬೇಂದ್ರೆ ಅವರ 126ನೇ ಜನ್ಮದಿನ ಸಂದರ್ಭದಲ್ಲಿ ಸಾಧನಕೇರಿಯ ಬೇಂದ್ರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂಬುದಾಗಿ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ತಿಳಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ಗುರುದೇವಿ. ಹುಲ್ಲಪ್ಪನವರಮಠ, ಸದಸ್ಯರಾದ ಡಾ. ಎಂ.ಬಿ. ಹೂಗಾರ, ಡಾ. ವೆಂಕಟಗಿರಿ: ದಳವಾಯಿ ಅವರನ್ನು ಒಳಗೊಂಡ ತಂಡ ಒಟ್ಟು ಮೂವರ ಹೆಸರನ್ನು ಆಯ್ಕೆ ಮಾಡಿ ನೀಡಿದ್ದರು. ಬುಧವಾರ ಏರ್ಪಡಿಸಿದ್ದ ಟ್ರಸ್ಟ್ ಮಂಡಳಿ ಸಭೆಯಲ್ಲಿ ನಗರದ ಡಾ. ಸೋಮಶೇಖರ ಇಮ್ರಾಪುರ ಹೆಸರನ್ನು ಅಂತಿಮಗೊಳಿಸಲಾಗಿದೆ. 

ಸೋಮಶೇಖರ ಇಮಾಪುರ ಅವರ ಸಾಧನೆ: ಮೂಲತಃ ಗದಗ ಜಿಲ್ಲೆ ಅಬ್ಬಿಗೇರಿಯವರಾದ ಡಾ. ಸೋಮಶೇಖರ ಇಮ್ರಾಪುರ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ವಿವಿಯ ವಿದ್ವತ್ ವಲಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು, ಕನ್ನಡ ಕಾವ್ಯ, ವಿಮರ್ಶೆ, ಜಾನಪದ ಕಲೆ, ಸಾಹಿತ್ಯ ಸಂಗ್ರಹ, ಕಲಾ ಪ್ರದರ್ಶನ, ಸಂಸ್ಕೃತಿಗೆ ಸಂಬಂಧಿಸಿ 38 ಕೃತಿಗಳನ್ನು ರಚಿಸಿದ್ದಾರೆ.

ಸೋಮಶೇಖರ ಇಮ್ರಾಪುರ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

MORE FEATURES

ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ: ಡಿ.ಜಿ. ಮಲ್ಲಿಕಾರ್ಜುನ

17-04-2024 ಬೆಂಗಳೂರು

“ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ. ಸೃಜನಶೀಲ ಮನಸ್ಥಿತಿ, ಕಲಾವಿದನೊಬ್ಬನ ಕಣೋಟ ಇದ್ದರಷ್ಟೇ ಉತ್ತಮ ಛಾಯಾಚಿತ್ರಗ...

ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳಿಂದ ಮನೆಮಾತಾದ ತರಾಸು ಅವರ ಕುರಿತ ಒಳನೋಟ

17-04-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳಿಂದ ಮನೆಮಾತಾದ ತರಾಸು ಅವರ ಕುರಿ...

ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹೆತ್ತವರು ಅಪ್ರಸ್ತುತರಾಗುತ್ತಾರೆ

17-04-2024 ಬೆಂಗಳೂರು

"ಪ್ರತಿನಿತ್ಯದ ಕಿರಿಕಿರಿಯಿಂದ ದೂರವಾಗಲು ಮಕ್ಕಳು ಉದ್ಯೋಗದ ನೆಪ ಹೇಳಿ ದೂರ ಉಳಿಯುವುದು ಸಾಮಾನ್ಯವಾದರೆ, ಜೋಗಿಯವರ ...