ಉತ್ತಮ ಮನುಷ್ಯರಾಗಬೇಕಾದರೆ ನಕಾರಾತ್ಮಕ ಸಂಗತಿಗಳಿಂದ ದೂರವಿರಿ: ಮಲ್ಲೇಪುರಂ ಜಿ. ವೆಂಕಟೇಶ

Date: 20-11-2023

Location: ಬೆಂಗಳೂರು


ಬೆಂಗಳೂರು: ಸಮನ್ವಿತ ಪ್ರಕಾಶನದಿಂದ ಲೇಖಕ ರಾಜಶೇಖರ ಜೋಗಿನ್ಮನೆ ಅವರ ‘ಕೇಳು ಧನಂಜಯ’ ಕಾದಂಬರಿಯ ಲೋಕಾರ್ಪಣಾ ಕಾರ್ಯಕ್ರಮವು 2023 ನ. 20 ಸೋಮವಾರದಂದು ನಗರದಲ್ಲಿ ನಡೆಯಿತು.

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, “ಒಬ್ಬ ಮನುಷ್ಯನು ನಕಾರಾತ್ಮಕ ಸಂಗತಿಗಳಿಂದ ದೂರವಿದ್ದಷ್ಟು ಆತ ಒಳ್ಳೆಯ ಮನುಷ್ಯನ್ನಾಗಿ ರೂಪುಗೊಳ್ಳಲು ಸಾಧ್ಯ. ನೆಮ್ಮದಿಯನ್ನು ಹರಸಿ ಹೋಗಬೇಕಾದರೆ ಪೂರ್ವಗ್ರಹ ಪೀಡಿತ ಅಂಶಗಳನ್ನು ದೂರವಿರಿಸಿ. ಅವುಗಳನ್ನು ಆವಾಹನೆ ಮಾಡಿಕೊಳ್ಳುತ್ತಾ ಹೋದರೆ ಮನಸ್ಸು ಕಲ್ಮಶವಾಗುತ್ತದೆ. ಇನ್ನು ಸಾಹಿತ್ಯದ ಓದು ಇದ್ದರೆ ಪೂರ್ವ ಗ್ರಹದಿಂದ ಹೊರಬಂದು ನೆಮ್ಮದಿಯನ್ನು ಕಾಣಲು ಸಾಧ್ಯ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃತಿಕಾರ ರಾಜಶೇಖರ ಜೋಗಿನ್ಮನೆ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕಥೆಗಾರ ಅಬ್ದುಲ್ ರಶೀದ್, ಪ್ರಕಾಶಕ ರಾಧಾಕೃಷ್ಣ ಕೌಂಡಿನ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

MORE NEWS

‘ಸಾಹಿತ್ಯ ಬಂಗಾರ ಪ್ರಶಸ್ತಿ’ ಗೆ ಕುಂ.ವಿ, ಸುಶೀಲಮ್ಮ, ಪ್ರತಿಭಾ ಆಯ್ಕೆ

22-10-2024 ಬೆಂಗಳೂರು

ಬೆಂಗಳೂರು: ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವ 2024ನೇ ಸಾಲಿನ ’ಸೇವಾ ಬಂಗಾರ ಪ್ರಶಸ್ತಿ’ ಗೆ ...

ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು; ರಾಘವೇಂದ್ರ

21-10-2024 ಬೆಂಗಳೂರು

ಧಾರವಾಡ: ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಡಾ.ಜಿ.ಎಸ್ ಆಮೂರ ಜನ್ಮ ಶತಮಾನೋತ್ಸವ ಸಮಿತಿಯಿಂದ &lsq...

‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭ

21-10-2024 ಬೆಂಗಳೂರು

ಬೆಂಗಳೂರು: ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ...