ಆತ್ಮ ಜಿ.ಎಸ್. ಅವರು ಮೂಲತಃ ಸಾಗರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ. ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರವಾಗಿದ್ದು, ಇವರ ಕವನ, ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.
ಎಷ್ಟೋ ದಿನಗಳ ಕೆಳಗೆ
ದಾರಿಯಲ್ಲಿ ಸಿಕ್ಕಿದ್ದ ಅವ
ಬಣ್ಣ ಬಣ್ಣದ ಕನಸಿತ್ತು ಕಣ್ಣಲ್ಲಿ
ಜಗವನ್ನೇ ಗೆಲ್ಲುವೆ ಎಂಬ ವಿಶ್ವಾಸವಿತ್ತು
ಪದಗಳ ಪಡೆಯೇ ಇತ್ತು ಆತನಲ್ಲಿ
ಕತೆ,ಕವಿತೆ ಬರೆಯಲು.
ವಿತಂಡ ವಾದಗಳಿಗೆ ಉತ್ತರಿಸಲು,
ಸರಿಯಾಗಿ ಅರ್ಥ ಮಾಡಿಸಲು
ಜ್ಞಾನದ ಭಂಡಾರವೇ ಇತ್ತು,
ಎಲ್ಲಕ್ಕ...