Story/Poem

ಸತ್ಯಮಂಗಲ ಮಹಾದೇವ

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ಕನ್ನಡದ ಹಿರಿಮೆಯನ್ನು ಪಸರಿಸಿದ್ದಾರೆ.

More About Author

Story/Poem

ಜೀವ-ಭಾವ 

ಕೂಡಿ ಆಡಲಿಲ್ಲ ಹಾಡುತ್ತಾ ಬೆಳೆಯಲಿಲ್ಲ ಜೊತೆಗೆ ಬಾಲ್ಯವೆಲ್ಲ ಕಳೆದವು ಯೌವನದ ಬಹುಭಾಗವೂ ಒಂದೇ ಗಾಳಿಯ ಉಸಿರು ಒಂದೇ ನೆಲದ ಹಸಿರು ಅವಳ ಮೊಗವ ಕಂಡ ದಿನದಿಂದ ಆತ್ಮಾಹ್ಲಾದವು ಜೀವೋತ್ಕರ್ಷವು ಯಾವುದೋ ಅನಂತ ಕಾಲದ ಗೆಳತಿಯಂತೆ   ದಿನಕರನ ನೋಟಕ್ಕೆ ಮೈಚಾಚಿ ...

Read More...

ನನ್ನ ಕವಿತೆ

ರಾಗಿಯ ತೆನೆ ಹೀಚುವಾಗ  ಜೋಳದ ತೆಲೆ ಸುಲಿಯುವಾಗ ಸುಟ್ಟ ಕಾಳು ಜಗಿವಾಗ ಹೊಮ್ಮುವ ಕಂಪು ನನ್ನ ಕವಿತೆ ಹಿಟ್ಟಿನೆಸರು ಕುದಿಯುವಾಗ ಮಳೆಯು ಹೊಯ್ದು ತೋಯ್ಸಿದಾಗ ಹೊಮ್ಮುವ ಪರಿಮಳದಲ್ಲಿ ನನ್ನ ಕವಿತೆ ಗಿಣ್ಣಾಲು ಕುದಿಯುವಾಗ ಎಳೆಗರು ಚಂಗನೆ ನೆಗೆಯುವಾಗ ಕರುವಿನ ಬಾಲದಂತೆ ಖುಷಿಯ...

Read More...