Book Watchers

ರವಿರಾಜ್‌ ಸಾಗರ್‌

ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ.

Articles

ಕಾವ್ಯಕೃಷಿ ಆರಂಭಿಸಿ ಭರವಸೆಯ ಕವಿತೆಗಳ ಜಮಾ ಮಾಡಿದ ಶ್ರುತಿ

ಅವರು 'ಕದನ ವಿರಾಮವಿಲ್ಲದ ಅಂತರ್ಯುದ್ಧ' ಎನ್ನುತ್ತಾ ಋತು ಸಂಕಟ ಕವಿತೆಯನ್ನು ಕೊನೆಗೊಳಿಸಿದ್ದು, ಕೊನೆಯಿಲ್ಲದ ಸ್ತ್ರೀ ಸಂಕಟಗಳನ್ನು ಶಕ್ತ ಪ್ರತಿಮೆಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಈ ಕೃತಿಯ ಹಲವು ಕವನಗಳಲ್ಲಿ ಇದು ಗೋಚರವಾಗುತ್ತದೆ. ಅಕ್ಕನ ಮಹೆಂಜೋದಾರೋ, ಭೇಟಿಯಾಗಿದ್ದರು ಆ ಹುಡುಗಿಯರು, ಜನ ಮಾತನಾಡಲಿಲ್ಲ, ಅವಳು, ಕ್ಷಮಿಸಿ ನಾನು ಅಂಥವಳಲ್ಲ.... ಇನ್ನು ಹಲವು ಕವಿತೆಗಳಲ್ಲಿ ಅವರ ಸ್ತ್ರೀ ದನಿ ಸಹಜವಾಗಿ ಕವಿತೆಯಾಗಿದೆ.

Read More...