Book Watchers

ಶ್ರೀ ಹರ್ಷ

ಶ್ರೀಹರ್ಷ ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರು. ಮೈಸೂರಿನಲ್ಲಿ ವಾಸವಿರುವ ಇವರು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದ ಜೊತೆ ಜೊತೆಗೆ ಕಿರುತೆರೆ ಧಾರಾವಾಹಿಗೆ ಕಥೆಯನ್ನು ಬರೆಯುವ ಶ್ರೀಹರ್ಷ ಸದ್ಯ ಉದಯ ಟಿವಿಯ ಕಸ್ತೂರಿ ನಿವಾಸ ಧಾರಾವಾಹಿಗೆ ಚಿತ್ರಕಥೆ ಬರೆಯುತ್ತಿದ್ದಾರೆ. ಓದು, ಬರವಣಿಗೆ ಇವರ ಇಷ್ಟದ ಹವ್ಯಾಸ.

Articles

ತೇಜೋ ತುಂಗಭದ್ರಾ!

ನಾವೆಲ್ಲಾ ಶಾಲಾ ದಿನಗಳಲ್ಲಿ ಸಮಾನಾಂತರ ರೇಖೆಗಳು ಒಂದನ್ನೊಂದು ಸಂಧಿಸುವುದಿಲ್ಲ ಅಂತ ಓದಿದ್ದೇವೆ. ಪೋರ್ಚುಗಲ್ ನ ತೇಜೋ ಮತ್ತು ವಿಜಯನಗರದ ತುಂಗಭದ್ರಾ ಎರಡೂ ನದಿಗಳೂ ಅಂತದ್ದೇ ಪ್ಯಾರಲಲ್ ಲೈನ್ಸ್. ಆದರೆ ವಸುಧೇಂದ್ರರ ಕಥನ ಶೈಲಿಯಲ್ಲಿ ಆ ಎರಡೂ ರೇಖೆಗಳು ಸೊಗಸಾಗಿ ಸಂಧಿಸಿವೆ. ಎಲ್ಲೂ ಆ ಎರಡೂ ರೇಖೆಗಳು ಸಂಧಿಸುವಂತೆ ಮಾಡಬೇಕೆಂಬ ಹಠದಲ್ಲಿ ಅವು ಸಂಧಿಸಿಲ್ಲ, ಕಥನ ಈ ನಿಟ್ಟಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

Read More...