About the Author

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ.

ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020)

2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ರತ್ನ" ಪ್ರಶಸ್ತಿ, 2021 ರ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ " ಬಸವಶ್ರೀ " ಪ್ರಶಸ್ತಿ.

ಹರಿ ನರಸಿಂಹ ಉಪಾಧ್ಯಾಯ