About the Author

'ಆ ಮುಖ', 'ನನ್ನ ನಿನ್ನ ನೆಂಟತನ', 'ಪರಮೂ ಪ್ರಪಂಚ' ಹಾಗೂ 'ಕಾಣದ ಕಡಲು' ಸಂಕಲನಗಳ ಮೂಲಕ ಗಮನ ಸೆಳೆದವರು ಕಥೆಗಾರ ಇಂದ್ರಕುಮಾರ್ ಎಚ್‌.ಬಿ. ವೃತ್ತಿಯಿಂದ ಶಿಕ್ಷಕರಾಗಿರುವ ಇವರ ಕಾದಂಬರಿಗಳು ’ಮೃದುಲಾ’ ಮತ್ತು’ಹುಲಿಕಾನು’. 

ಚಿತ್ರದುರ್ಗ ಮೂಲದವರಾದ ಇಂದ್ರಕುಮಾರ್ ಅವರ ಕತೆಯೊಂದು ’ಸೂಜಿದಾರ’ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ತಮ್ಮದೇ ಇಂಪನ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. 

ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ, ಜನ್ನಾ ಸನದಿ ಸಾಹಿತ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 'ಯುವ ಪುರಸ್ಕಾರ',  ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಅವರು ಗುಲ್ಬರ್ಗಾ ವಿವಿಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 

ಇಂದ್ರಕುಮಾರ್‌ ಎಚ್.ಬಿ