About the Author

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು.

ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ಧರಣಿ, ಜುಗಲ್ಬಂಧಿ ಕವಿತೆಗಳು, ನನ್ನೊಳಗಿನ ನಿನ್ನ ಕಥೆಗಳು, ಭಿನ್ನ ವಿಭಿನ್ನ, ತಾಮ್ರವರ್ಣದ ತಾಯಿ, ಚಿಟ್ಟಿ, ಒಬ್ಬಳೇ ಆಡುವ ಆಟ, ಯಾರ ಜಪ್ತಿಗೂ ಸಿಗದ ನವಿಲುಗಳು, ಆಕಾಶದಗಲ ನಗುವಿನ ಅವಧೂತ, ಗುಲಾಬಿ ಟಾಕೀಸ್, ಸಂಪಾದಿತ ಕೃತಿಗಳು. 'ಮೋದಾಳಿ' ಅಪ್ರಕಟಿತ ನಾಟಕ. ಇವು ಪಿ ಚಂದ್ರಿಕಾ ಅವರ ಪ್ರಮುಖ ಪ್ರಕಟಿತ ಕೃತಿಗಳು.

ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ (ನನ್ನೊಳಗಿನ ನಿನ್ನ ಕಥೆಗಳು, ತಾಮ್ರವರ್ಣದ ತಾಯಿ), ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕೆ. ಪಿ ಪೂರ್ಣಚಂದ್ರ ತೇಜಸ್ವಿ ನೈಸರ್ಗಿಕ ಕೃಷಿ ಮಹಿಳಾ ಪ್ರಶಸ್ತಿ, ಮಂಡ್ಯಾ ಆರ್ಗ್ಯಾನಿಕ್ ಗೌರವ ಇತ್ಯಾದಿ ಚಂದ್ರಿಕಾ ಅವರನ್ನು ಅರಸಿ ಬಂದಿರುವ ಪ್ರಶಸ್ತಿ ಮತ್ತು ಗೌರವಗಳು.

ಪಿ. ಚಂದ್ರಿಕಾ

BY THE AUTHOR