ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಆರ್.ಸುನಂದಮ್ಮ ಅವರು ಹುಟ್ಟಿದ್ದು 1960 ಆಗಸ್ಟ್ 22ರಂದು. ಮೂಲತಃ ಕೋಲಾರ ಜಿಲ್ಲೆ ವೆಂಕಟಾಪುರದವರು.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜಕಿ ಪ್ರಶಸ್ತಿ ದೊರೆತಿದೆ. ದ್ವಿತ್ವ, ಲೇಬರ್ ವಾರ್ಡಿನಲ್ಲೊಂದು ದಿನ ಇತರೆ, ಜನಪದ ಸಾಹಿತ್ಯದಲ್ಲಿ ಮಹಿಳಾ ಜಗತ್ತು ಇವರ ಪ್ರಮುಖ ಕೃತಿಗಳು.