ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು ;ಒಂದು ಅಧ್ಯಯನ.

Author : ಆರ್. ಸುನಂದಮ್ಮ

Pages 306

₹ 85.00




Year of Publication: 1994
Published by: ತಿರುಮಲ ತಿರುಪತಿ ದೇವಾಸ್ಥಾನ
Address: ತಿರುಪತಿ (ತೆಲಂಗಾಣ)

Synopsys

ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು;ಒಂದು ಅಧ್ಯಯನ ಕೃತಿಯು ಡಾ. ಆರ್‌ ಸುನಂದಮ್ಮ ರಚಿಸಿದ್ದು, ತಿರುಮಲ ತಿರುಪತಿ ದೇವಾಸ್ಥಾನದ ಧನಸಹಾಯದಿಂದ ಪ್ರಕಟವಾಗಿದೆ. ಕಾಲ ದೃಷ್ಟಿ ಮತ್ತು ಸಾಹಿತ್ಯ ದೃಷ್ಟಿಯನ್ನಿಟ್ಟುಕ್ಕೊಂಡು ಲೇಖಕಿಯು, ಹತ್ತು ಮಂದಿ ದಾಸರನ್ನು ಬಳಸಿಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ದಾಸಸಾಹಿತ್ಯದ ದೃಷ್ಟಿಯಿಂದ ಗುರುತಿಸಲಾಗಿರುವ ಶ್ರೀಪಾದರಾಜರು ಮತ್ತು ಅವರ ಸಾಹಿತ್ಯವನ್ನು ಇಲ್ಲಿ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಪುರಂದರದಾಸ ಮತ್ತು ಕನಕದಾಸರನ್ನು ಬೆಳೆಸಿ ಅವರಿಗೆ ಪ್ರೋತ್ಸಾಹ ನೀಡಿದ ವ್ಯಾಸರಾಯರ ಸಾಹಿತ್ಯವನ್ನು ಇಲ್ಲಿ ಪ್ರತ್ಯೇಕ ಪರಿಶೀಲನೆಗೆ ಗುರಿಪಡಿಸಲಾಗಿದೆ. ದಾಸರ ರಚನೆಯಲ್ಲಿ ಕಂಡುಬರುವ ಜಾನಪದ ಅಂಶಗಳ ಅಧ್ಯಯನವನ್ನೂ ಕೂಡ ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ.

 

About the Author

ಆರ್. ಸುನಂದಮ್ಮ
(22 August 1960)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಆರ್.ಸುನಂದಮ್ಮ ಅವರು ಹುಟ್ಟಿದ್ದು 1960 ಆಗಸ್ಟ್ 22ರಂದು.  ಮೂಲತಃ ಕೋಲಾರ ಜಿಲ್ಲೆ ವೆಂಕಟಾಪುರದವರು.  ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಎನ್‌.ಎಸ್.ಎಸ್. ಕಾರ್ಯಕ್ರಮ ಸಂಯೋಜಕಿ ಪ್ರಶಸ್ತಿ ದೊರೆತಿದೆ.  ದ್ವಿತ್ವ, ಲೇಬರ್ ವಾರ್ಡಿನಲ್ಲೊಂದು ದಿನ ಇತರೆ, ಜನಪದ ಸಾಹಿತ್ಯದಲ್ಲಿ ಮಹಿಳಾ ಜಗತ್ತು ಇವರ ಪ್ರಮುಖ ಕೃತಿಗಳು. ...

READ MORE

Related Books