ಸಿ.ವಿ. ರಾಮನ್

Author : ವಸುಂಧರಾ ಭೂಪತಿ

Pages 48

₹ 30.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805

Synopsys

ಚಂದ್ರಶೇಖರ ವೆಂಕಟರಾಮನ್ ಸಿ.ವಿ. ರಾಮನ್ ಎಂದೇ ಖ್ಯಾತರು. ಭಾರತದ ಆದ್ಯ ಭೌತ ಶಾಸ್ತ್ರಜ್ಞರು. 1930ರಲ್ಲಿ ‘ಬೆಳಕಿನ ಚೆದುರುವಿಕೆ‘ಯ ಮೇಲೆ ಸಂಶೋಧನೆಯನ್ನು ನಡೆಸಿದ ‘ಭೌತಶಾಸ್ತ್ರ’ಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರಲ್ಲಿ ಎರಡನೆಯವರು. ಈ ಭೌತ ವಿಜ್ಞಾನಿ ರಾಮನ್ ವಿಜ್ಞಾನವನ್ನು ಸ್ವಸಾಮರ್ಥ್ಯದಿಂದ ಕಲಿತದ್ದು, ಕಲ್ಕತ್ತದ ‘ಇಂಡಿಯನ್ ಅಸೊಸಿಯೇಶನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್‘ ಸಂಸ್ಥೆಯಲ್ಲಿ ತಮ್ಮ ಸಹೋದ್ಯೋಗಿ ಕೆ.ಎಸ್. ಕೃಷ್ಣನ್ ಜತೆಗೂಡಿ ಕೆಲಸ ಮಾಡುವಾಗ, ಫೆಬ್ರವರಿ 28, 1928ರಂದು ಬೆಳಕಿನ ಚೆದುರುವಿಕೆಗೆ ಸಂಬಂಧಿಸಿದ ಹಾಗೆ ನಿರ್ಣಾಯಕ ಫಲಿತಾಂಶವನ್ನು ಪಡೆದುದರ ಸವಿವರವನ್ನು ಲೇಖಕಿ ಸೊಗಸಾಗಿ ಪರಿಚಯಿಸಿದ್ದಾರೆ.

About the Author

ವಸುಂಧರಾ ಭೂಪತಿ
(05 June 1962)

ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ,  ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.  ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...

READ MORE

Related Books