ಗುಡ್ಡದ ಗುಡುಗು

Author : ಪಂಚಾಕ್ಷರಿ ಬಿ. ಪೂಜಾರಿ

Pages 104

₹ 65.00




Year of Publication: 2009
Published by: ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನ ಪ್ರಕಾಶನ ಸಂಸ್ಥೆ
Address: ದಂಡಗುಂಡ ತಾ: ಚಿತ್ತಾಪುರ, ಜಿಲ್ಲೆ: ಕಲಬುರಗಿ

Synopsys

ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರು ಬರೆದ ತತ್ವಪದಗಳ ಸಂಕಲನ-ಗುಡ್ಡದ ಗುಡುಗು. ಪತ್ರಕರ್ತ ಹಿರಿಯ ಸಾಹಿತಿ ಬಿ. ಮಹಾದೇವಪ್ಪ ಅವರು ಕೃತಿಗೆ ಮುನ್ನುಡಿ ಬರೆದು ‘ಇಲ್ಲಿಯ ತತ್ವಪದಗಳು ತುಂಬಾ ಅರ್ಥಪೂರ್ಣವಾಗಿವೆ. ಜೀವನ ತತ್ವಭರಿತವಾಗಿವೆ. ಭಜನೆ ಹಾಡುಗಳ ಸ್ವರೂಪದಲ್ಲಿವೆ. ಜೀವನಾನುಭವದೊಡನೆ ಅಭಿವ್ಯಕ್ತಿ ಸಾಮರ್ಥ್ಯ ಇವರಿಗೆ ಸಿದ್ಧಿಸಿದೆ. ತಿಣುಕಿ ಬರೆಯದೇ ಸಹಜತೆಯನ್ನು ಒಳಗೊಂಡಿವೆ. ದೈವದಲ್ಲಿ ಅಚಲ ನಂಬಿಕೆ ಇರಬೇಕು ಎನ್ನುವ ಮೂಲಕ ಮನುಷ್ಯನ ಭ್ರಮೆಗಳನ್ನು ತೆರೆದು ತೋರಿದ್ದಾರೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಸಿ.ಎಂ. ಪಟ್ಟೇದಾರ ಅವರು ಕೃತಿಗೆ ಬೆನ್ನುಡಿ ಬರೆದು ‘ಸಾಮಾಜಿಕ ಅನಿಷ್ಟಗಳ ವಿರುದ್ಧ ಕಾವ್ಯ ರಚನೆಯ ಮೂಲಕ ಕವಿಗಳ ಹೋರಾಟವಿರುವುದನ್ನು ಕಾಣುತ್ತೇವೆ. ತತ್ವಪದಗಳ ಸ್ವರೂಪದಲ್ಲಿದ್ದರೂ ವೈಚಾರಿಕತೆ ಇದೆ’ ಎಂದು ಶ್ಲಾಘಿಸಿದ್ದಾರೆ. 

 

About the Author

ಪಂಚಾಕ್ಷರಿ ಬಿ. ಪೂಜಾರಿ
(10 August 1960)

ಕವಿ ಪಂಚಾಕ್ಷರಿ ಬಿ. ಪೂಜಾರಿ  ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದವರು. ವೃತ್ತಿಯಿಂದ  ದಂಡಗುಂಡ ಬಸವಣ್ಣನ ದೇವಸ್ಥಾನದ ಅರ್ಚಕರು. ಬಿ.ಎ. ಪದವೀಧರರು. ತಂದೆ ಬಸವಣ್ಣೆಪ್ಪ ಪೂಜಾರಿ ತಾಯಿ ಮಹಾದೇವಮ್ಮ ಪೂಜಾರಿ. ದಂಡಗುಂಡ ಸರಕಾರಿ  ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು. ಕಸಾಪ ದಿಗ್ಗಾವಿ ವಲಯ ಅಧ್ಯಕ್ಷರು.  ಕೃತಿಗಳು: ಅಂತರಾಳದ ಪ್ರಭೆ (ವಚನಗಳ ಸಂಕಲನ), ಗುಡ್ಡದ ಗುಡುಗು (ತತ್ವಪದಗಳ ಸಂಕಲನ), ಮನದಾಳದ ಮಾತು (ನುಡಿಮುತ್ತುಗಳು), ತತ್ವಪದ ಸಂಪದ (ತತ್ವಪದಗಳ ಸಂಪಾದನಾ ಗ್ರಂಥ), ದಂಡಗುಂಡ ಬಸವಣ್ಣ ನಾಮಾವಳಿ,  ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ, ದಿಗ್ಗಾವಿ ದೀಪ (ಕವನ ಸಂಕಲನ)  ಪ್ರಶಸ್ತಿ-ಗೌರವಗಳು: ಚಿತ್ತಾಪುರ ತಾಲೂಕು ಕನ್ನಡ ...

READ MORE

Related Books