ಜಾನಪದ ಸೌರಭ

Author : ನಿಂಗನಗೌಡ ಹ. ದೇಸಾಯಿ (ಹನಿ)

Pages 68

₹ 55.00




Year of Publication: 2019
Published by: ಷ.ಬ್ರ.ಶ್ರೀ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು
Address: ಅಧ್ಯಕ್ಷರು, ಶ್ರೀ ಗುರುಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನ(ರಿ), ಸಂಸ್ಥಾನ ಹಿರೇಮಠ್, ಕೆಂಭಾವಿ, ಸುರಪುರ ತಾಲ್ಲೂಕು, ಯಾದಗರಿ ಜಿಲ್ಲೆ

Synopsys

ಲೇಖಕ ನಿಂಗನಗೌಡ.ಹ.ದೇಸಾಯಿ (ಹನಿ) ಅವರ ತ್ರಿಪದಿಗಳ ಸಂಗ್ರಹ ಕೃತಿ ಜಾನಪದ ಸೌರಭ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾಗಿರುವ ಜಯಶ್ರಿ ದಂಡೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಈ ಕೃತಿಯಲ್ಲಿ ಪರಸನಹಳ್ಳಿಯ ಸೂಗಮ್ಮ ಹಾಗೂ ಕಮಲಮ್ಮ ಅವರು ಹಾಡಿದ ಜಾನಪದ ತ್ರಿಪದಿಗಳಿವೆ. ಕುತೂಹಲದಿಂದ ಸೂಗಮ್ಮ ಹಾಗೂ ಕಮಲಮ್ಮ ಅಜ್ಜಿಯ ಹತ್ತಿರ ಹೋಗಿ ಅವರ ಎದೆ ತುಂಬ ತುಂಬಿದ ಹಾಡುಗಳನ್ನು ಸಂಗ್ರಹಿಸಿಕೊಂಡು ಬಂದುದರ ಫಲವೇ ಈ ಕೃತಿ. ಸೂಗಮ್ಮ ಅವರು ಹಾಡಿದ 142 ಹಾಗೂ ಕಮಲಮ್ಮ ಅವರು ಹಾಡಿದ 10 ತ್ರಿಪದಿಗಳಿವೆ. ಎಲ್ಲ ತ್ರಿಪದಿಗಳು ಅವರು ನೆಲೆಸಿದ ಊರಿನ ಪರಿಸರದ ಸುತ್ತ ಆಗಿ ಹೋದ ಮಹಾನುಭಾವರ ದೇವಾನುದೇವತೆಗಳ ಸ್ತುತಿ ಆಗಿರುವುದು ವಿಶೇಷ ಎಂಬುದಾಗಿ ಹೇಳಿದ್ದಾರೆ.

About the Author

ನಿಂಗನಗೌಡ ಹ. ದೇಸಾಯಿ (ಹನಿ)
(01 June 1971)

ಕವಿ, ಸಂಶೋಧಕ ನಿಂಗನಗೌಡ.ಹ.ದೇಸಾಯಿ (ಹನಿ) ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪರಸನಹಳ್ಳಿ  ಗ್ರಾಮದವರು. ತಂದೆ ಹಳ್ಳೆಪ್ಪಗೌಡ. ತಾಯಿ ನೀಲಮ್ಮ ದೇಸಾಯಿ. ಪರಸನಹಳ್ಳಿಯಲ್ಲಿ  ಪ್ರಾಥಮಿಕ ಹಾಗೂ ಕೆಂಭಾವಿಯಲ್ಲಿ ಪ್ರೌಡ ಶಿಕ್ಷಣ ಮತ್ತು ಸಿಂದಗಿಯಲ್ಲಿ ಪದವಿ ಶಿಕ್ಷಣ, ತದನಂತರ ಧಾರವಾಡದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದರು.  ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸರಪುರ ತಾಳೂಕಿನ ವಿವಿಧೆಡೆ ಸೇವೆ ಸಲ್ಲಿಸಿ, ಚಿಣ್ಣರ ಮೇಳ, ಸಮುದಾಯ ಎಸ್.ಡಿ.ಎಂ.ಸಿ ಮೇಳ.ಚಿಣ್ಣರ ಅಂಗಳ, ಕಾಯ೯ಕ್ರಮಗಳನ್ನು ಸಂಘಟಿಸಿದ್ದಾರೆ. ಸದ್ಯ, ಸರಕಾರಿ ಬಾಲಕಿಯರ ಪ್ರೌಡಶಾಲೆಯಲ್ಲಿ ಇತಿಹಾಸ ಶಿಕ್ಷಕರಾಗಿದ್ದಾರೆ. ಪ್ರೌಢಶಾಲೆ ಹಾಗೂ ಕಾಲೇಜು ಮಕ್ಕಳಿಗಾಗಿ ಇತಿಹಾಸ ಸಪ್ತಾಹ '''ಹತ್ತರ ಭಯ ಹತ್ತಿರ ಬೇಡ’  ಎಂಬ ...

READ MORE

Related Books