ಜೀವಣ್ಣನ ಆಧುನಿಕ ತ್ರಿಪದಿಗಳು

Author : ಜೀವರಾಜ ಹ ಛತ್ರದ

Pages 72

₹ 100.00




Year of Publication: 2020
Published by: ಶ್ರೀ ಗುರು ಕರಿಬಸವೇಶ್ವರ ಪ್ರಕಾಶನ
Address: ಹಿರೇಬೂದಿಹಾಳ, ತಾ. ಹಿರೇಕೆರೂರು-581109, ಜಿ. ಹಾವೇರಿ

Synopsys

ಕವಿ ಜೀವರಾಜ ಹ ಛತ್ರದ ಅವರ ಕವನ ಸಂಕಲನ- ’ಜೀವಣ್ಣನ ಆಧುನಿಕ ತ್ರಿಪದಿಗಳು’.ಇಲ್ಲಿಯ  ತ್ರಿಪದಿಗಳಲ್ಲಿ ಎದ್ದು ಕಾಣುವ ವಸ್ತು ವಿಷಯವೆಂದರೆ ಪ್ರಧಾನವಾಗಿ ಆಧುನಿಕತೆ , ಆಧುನಿಕತೆಯ ಶಿಸ್ತು ಆಗಿ ಬೆಳೆಯುತ್ತಿರುವ ತೀವ್ರವಾದ ಯಾಂತ್ರಿಕತೆ, ತನ್ನ ಕಬಂಧ ಬಾಹುಗಳಲ್ಲಿ ಜೀವನದ ವಿವಿಧ ಮಜಲು ಮಗ್ಗುಲಗಳನ್ನು ಹಿಡಿದು ಹೇಗೆ ಹಿಚುಕುತ್ತಿದೆ ಎಂಬುದನ್ನು ಕವಿಯು ಮನಂಬುಗುವಂತೆ ಕಟ್ಟಿಕೊಟ್ಟಿದ್ದಾರೆ. ನಗರದ ಬದುಕು ತೀವ್ರ ಆಧುನಿಕತೆಯನ್ನು ತಬ್ಬಿಕೊಂಡು  ಬಡವಾಗಿದೆ. ರೈತ ಸಾವಯವ ಕೃಷಿಯನ್ನು, ಹೈನುಗಾರಿಕೆಯನ್ನು, ಶ್ರಮ ಸಂಸ್ಕೃತಿಯನ್ನು ಮರೆತು ಶಾರೀರಕವಾಗಿಯೂ ಅಶಕ್ತನಾಗಿದ್ದಾನೆ ಎಂಬುದನ್ನು ಅನೇಕ ತ್ರಿಪದಿಗಳು ದಾಖಲಿಸುತ್ತವೆ. ಕವಿಯು ಗುರುವನ್ನು ಗಿರಿಧಾಮಕ್ಕೆ ಹೋಲಿಸುವುದರ ಮೂಲಕ ಬದುಕಿನ ಬೇಗೆಗೆ ಗುರುವು ಹೇಗೆ ತಂಪೆರೆದು ತಣಿಸಬಲ್ಲ ಹಾಗೂ ಬದುಕಿನಲ್ಲಿ ಬಂದೊದಗುವ ಸುಖ- ಸಂಪತ್ತು- ಸಂತಸಗಳೆಲ್ಲಾ ಗುರುವಿನ ಕೃಪೆ ಎಂಬುದನ್ನು ಗುರುವಿನ ಮಹತಿಯನ್ನು ಸಾರುವ ಅನೇಕ ತ್ರಿಪದಿಗಳು ಇಲ್ಲಿವೆ.

 

About the Author

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...

READ MORE

Related Books