ಸರ್ವಜ್ನನ ವಚನಗಳು (ಚೆನ್ನಪ್ಪ)

Author : ರೆ. ಉತ್ತಂಗಿ ಚೆನ್ನಪ್ಪ

Pages 380

₹ 72.00




Year of Publication: 2016
Published by: ಪ್ರಕಾಶ ಸಾಹಿತ್ಯ
Address: ಬೆಂಗಳೂರು

Synopsys

ರೆ. ಉತ್ತಂಗಿ ಚೆನ್ನಪ್ಪ ಅವರು ಸಂಶೋಧಿಸಿ, ಸಂಪಾದಿಸಿದ ಕೃತಿ-ಸರ್ವಜ್ನನ ವಚನಗಳು. ಸರ್ವಜ್ನನು ಲೌಕಿಕ ವಿಚಾರಗಳನ್ನು ಸಾಹಿತ್ಯದ ಜೀವಾಳವಾಗಿಸಿದ್ದರೂ ಅಲೌಕಿಕತೆಯನ್ನು ಹೇಳುವ ಮೂಲಕ ಜೀವನದ ಅಂತಿಮ ಸತ್ಯವನ್ನು ಸಾಮಾನ್ಯ ಜನರಿಗೆ ತಿಳಿಯುವ ಹಾಗೆ ತ್ರಿಪದಿ ರಚಿಸಿದ್ದಾನೆ. ಕಿರಿದಾದ ಶಬ್ದ-ಪದ ಪುಂಜಗಳ ಮೂಲಕ ಹಿರಿದಾದ ಅರ್ಥ ನೀಡುವುದು ಈತನ ಸಾಹಿತ್ಯದ ವೈಶಿಷ್ಟ್ಯ. ಈತನ ವಚನಗಳನ್ನು ಮೊದಲಿಗೆ ಸಂಶೋಧಿಸಿ, ಸಂಪಾದಿಸಿದ ಕೀರ್ತಿ ಡಾ. ರೆ. ಉತ್ತಂಗಿ ಚೆನ್ನಪ್ಪನವರಿಗೆ ಸೇರುತ್ತದೆ. ಸರ್ವಜ್ನನ ವಚನಗಳ ಅಧ್ಯಯನಕ್ಕೆ ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ.

About the Author

ರೆ. ಉತ್ತಂಗಿ ಚೆನ್ನಪ್ಪ
(28 October 1881 - 04 August 1962)

ಉತ್ತಂಗಿ ಚೆನ್ನಪ್ಪ ಅವರ ಕಾವ್ಯನಾಮ ತಿರುಳು ಗನ್ನಡದ ತಿರುಕ. ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ.ಎಲ್ ರೈಸ್ ಮೊದಲಾದವರಿಂದ ಕನ್ನಡದಲ್ಲಿ ಕೆಲಸ ಆರಂಭವಾಯಿತು. ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಅದರಲ್ಲೂ ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವ ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಕವಿಯ ಸಂಪೂರ್ಣ ಪರಿಚಯ ಮಾಡಿಕೊಟ್ಟವರಲ್ಲಿ ಪ್ರಮುಖರು ರೆವೆರೆಂಡ್ ಉತ್ತಂಗಿ ಚೆನ್ನಪ್ಪ. ಇವರು ಭಾರತೀಯರು. ಧರ್ಮಪ್ರಚಾರ ಅವರ ವೃತ್ತಿಯಾದರೂ ಪ್ರವೃತ್ತಿಯಿಂದ ಕನ್ನಡದ ಕಟ್ಟಾಳು. ನಾಡಿಗರ ನಾಲಿಗೆಯ ಮೇಲೆ ನೆಲಸಿದ್ದ , ಪಂಡಿತ ಪಾಮರರ ಪ್ರೀತಿಗೆ ...

READ MORE

Related Books