ಸರ್ವಜ್ನನ ವಚನಗಳು (ಉತ್ತಂಗಿ)

Author : ರೆ. ಉತ್ತಂಗಿ ಚೆನ್ನಪ್ಪ

Pages 302

₹ 150.00




Year of Publication: 2017
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-560018

Synopsys

ಸರ್ವಜ್ನ ವಚನಗಳನ್ನು ಸಂಶೋಧಿಸಿ ಸಂಪಾದಿಸಿದ ಕೀರ್ತಿ ಡಾ. ಚೆನ್ನಪ್ಪ ಉತ್ತಂಗಿ ಅವರಿಗೆ ಸೇರುತ್ತದೆ. ಸರ್ವಜ್ನನು ಲೌಕಿಕ ತತ್ವವನ್ನು ಬೋಧಿಸಿದರೂ ರಾಮಾಯಣ, ಮಹಾಭಾರತ ದಂತಹ ಕಾವ್ಯಗಳ ಸಂದೇಶಗಳನ್ನು ಬಳಸಿ ಜೀವನ ತತ್ವಗಳನ್ನು ಸರಳಭಾಷೆಯಲ್ಲಿ ತ್ರಿಪದಿಗಳ ಮೂಲಕ ಜನರಿಗೆ ಪರಿಚಯಿಸಿದ್ದಾನೆ. ಇಂತಹ ಮಹನೀಯನ ತ್ರಿಪದಿಗಳನ್ನು ಸಂಗ್ರಹಿಸಿದ ಕೃತಿ ಇದು. ಸರ್ವಜ್ನನ ಕುರಿತ ಪ್ರತಿ ಸಂಶೋಧನೆಗೂ ಈ ಕೃತಿಯು ಆಕರ ಗ್ರಂಥವಾಗಿದೆ.

About the Author

ರೆ. ಉತ್ತಂಗಿ ಚೆನ್ನಪ್ಪ
(28 October 1881 - 04 August 1962)

ಉತ್ತಂಗಿ ಚೆನ್ನಪ್ಪ ಅವರ ಕಾವ್ಯನಾಮ ತಿರುಳು ಗನ್ನಡದ ತಿರುಕ. ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ.ಎಲ್ ರೈಸ್ ಮೊದಲಾದವರಿಂದ ಕನ್ನಡದಲ್ಲಿ ಕೆಲಸ ಆರಂಭವಾಯಿತು. ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಅದರಲ್ಲೂ ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವ ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಕವಿಯ ಸಂಪೂರ್ಣ ಪರಿಚಯ ಮಾಡಿಕೊಟ್ಟವರಲ್ಲಿ ಪ್ರಮುಖರು ರೆವೆರೆಂಡ್ ಉತ್ತಂಗಿ ಚೆನ್ನಪ್ಪ. ಇವರು ಭಾರತೀಯರು. ಧರ್ಮಪ್ರಚಾರ ಅವರ ವೃತ್ತಿಯಾದರೂ ಪ್ರವೃತ್ತಿಯಿಂದ ಕನ್ನಡದ ಕಟ್ಟಾಳು. ನಾಡಿಗರ ನಾಲಿಗೆಯ ಮೇಲೆ ನೆಲಸಿದ್ದ , ಪಂಡಿತ ಪಾಮರರ ಪ್ರೀತಿಗೆ ...

READ MORE

Related Books