ಮಾಯೆಯ ಮುಖಗಳು

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 130

₹ 580.00




Year of Publication: 2015
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ಪೂರ್ಣಚಂದ್ರ ತೇಜಸ್ವಿ ಅವರು ಕೇವಲ ಸಾಹಿತಿ-ಲೇಖಕ ಮಾತ್ರ ಅಲ್ಲ. ಅವರೊಬ್ಬ ಅತ್ಯುತ್ತಮ ಛಾಯಾಗ್ರಾಹಕ ಕೂಡ. ಅವರು ತಾವು ಕ್ಲಿಕ್ಕಿಸಿದ ಚಿತ್ರಗಳನ್ನು ಒಳಗೊಂಡ ಚಿತ್ರಲೇಖನಗಳನ್ನು ಹಲವು ಪತ್ರಿಕೆ-ವಿಶೇಷಾಂಕಗಳಲ್ಲಿ ಪ್ರಕಟಿಸಿದ್ದರು. ಅವುಗಳನ್ನು ಸೇರಿಸಿ ’ಮಾಯೆಯ ಮುಖಗಳು (2010) ಪ್ರಕಟಿಸಲಾಗಿದೆ. ಇದೊಂದು ದೃಶ್ಯ ಕಾವ್ಯ. ಇದು ಪರಿಸರದ ದಿನನಿತ್ಯದ ಘಟನೆಗಳನ್ನು ಚಿತ್ರಸಹಿತ ವಿವರಿಸಲಾಗಿದೆ. ಸುತ್ತಮುತ್ತಲಿನ ಜೀವವೈವಿಧ್ಯತೆಗಳು ಹಾಗೂ ವಿಸ್ಮಯಗಳನ್ನು ಬಿಡಿಬಿಡಿಯಾಗಿ ಓದುಗರಿಗೆ ತಲುಪಿಸುತ್ತವೆ. ಇಡೀ ಪ್ರಕೃತಿಯ ಸಮಸ್ತವನ್ನು ಸೂಕ್ಷ್ಮಮತಿಯಿಂದ ನೋಡುವ ತೇಜಸ್ವಿ ಅವರ ಸಂವೇದನಾಶೀಲತೆ ಇಲ್ಲಿ ವ್ಯಕ್ತವಾಗಿದೆ. ಅವರು ತೆಗೆದಿರುವ ಫೋಟೋ ಮತ್ತು ಸಣ್ಣ ಸಣ್ಣ ಲೇಖನಗಳು ಇಲ್ಲಿ ಸಮ್ಮಿಲನಗೊಂಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಫೋಟೋಗ್ರಫಿ ಮತ್ತು ಸಾಹಿತ್ಯದ ಅನುಸಂಧಾನವನ್ನು ಇಲ್ಲಿ ಕಾಣಬಹುದು. ಗಿಡ, ಮರ, ಬಳ್ಳಿ, ಬೆಟ್ಟಗುಡ್ಡ, ಜಲಪಾತಗಳು ಹಾಗೂ ಪ್ರಾಣಿ-ಪಕ್ಷಿ ಸಂಕುಲಗಳೆಲ್ಲವೂ ಪಾತ್ರಗಳಂತೆ ನಮ್ಮ ಕುತೂಹಲ ತಣಿಸುತ್ತವೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books