ನಮ್ಮ ಹತ್ತು ಅಪೂರ್ವ ಗಿಡಮರ ಬಳ್ಳಿಗಳು

Author : ಶಾಂತಿ ನಾಯಕ

Pages 119

₹ 200.00




Year of Publication: 2022
Published by: ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ
Address: ಸಿ. ಎಸ್. ಕಣವಿ ನಿರ್ದೇಶಕರು, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ - 580 003

Synopsys

ಪ್ರಸ್ತುತ ಶಾಂತಿ ನಾಯಕ ಅವರು 'ನಮ್ಮ ಹತ್ತು ಅಪೂರ್ವ ಗಿಡಮರ ಬಳ್ಳಿಗಳು' ಎಂಬ ಕೃತಿಯನ್ನು ರಚಿಸಿದ್ದಾರೆ. ಇದು ಕವಿವಿ ಪ್ರಸಾರಾಂಗದಿಂದ ಪ್ರಕಟಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ, ಲೇಖಕರು ಕೃತಿಯಲ್ಲಿ ಔಷಧಿಯ ಗುಣವುಳ್ಳ ಅಂಬೆಕೊಂಬು, ಅರಿಶಿನ, ತಂಡ್ಬಳ್ಳಿ, ದಾಗಡಿ, ಹಿಂಡ್ಲೆಕಾಯಿ, ನೆಲತಾಳೆ, ಮಾಲೆಬಂದಿ, ರಾವ್ ಗೆಂಡೆ, ಹಕ್ಕರಿಕೆ, ಹುರುಡೆ ಹೀಗೆ ಹತ್ತು ಸಸ್ಯಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದ್ದಾರೆ. ಇವನ್ನು ಓದುತ್ತಾ ಹೊದಂತೆ ಈ ಹೆಸರುಗಳು ನಮಗೆ ಗೊತ್ತಿವೆ ಎನಿಸಿದರೂ ಅವುಗಳ ಉಪಯೋಗ ಮತ್ತು ಮಹತ್ವವನ್ನು ತಿಳಿದು ಅಚ್ಚರಿ ಎನಿಸುತ್ತದೆ. ಔಷಧೋಪಯೋಗಗಳಲ್ಲದೆ ಸಾಂಸ್ಕೃತಿಕ ಉಪಯೋಗಗಳನ್ನು ಕೂಡ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ಸಸ್ಯ ಸಂಬಂಧಿ ಪೌರಾಣಿಕ ಮತ್ತು ಕಾಲ್ಪನಿಕ ಕಥೆಗಳ ಜೊತೆಗೆ ಓದುಗರಿಗೆ ಅನುಕೂಲವಾಗಲೆಂದು ಪ್ರತಿ ಸಸ್ಯದ ಛಾಯಾ ಚಿತ್ರವನ್ನು ಓದಗಿಸಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇಂತಹ ಮಹತ್ವದ ಸಸ್ಯಗಳ ಬಗ್ಗೆ ಮಾಹಿತಿ ಪಡೆದ ಓದುಗರು ಇವುಗಳನ್ನು ನೆಟ್ಟು ಬೆಳೆಸಿ, ಕಾಪಾಡುವ ಮನಸ್ಥಿತಿಗೆ ತಲುಪುತ್ತಾರೆಂಬುದರಲ್ಲಿ ಸಂಶಯವಿಲ್ಲ. ಇಂತಹ ಕೃತಿಯನ್ನು ನೀಡಿದ ಶ್ರೀಮತಿ ಶಾಂತಿ ನಾಯಕ ಅವರನ್ನು ಅಭಿನಂದಿಸುವೆ. ಓದುಗರು ಇದರ ಪ್ರಯೋಜನ ಪಡೆಯಲೆಂದು ಶುಭ ಹಾರೈಸುವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ ಕುಲಪತಿಗಳ ನುಡಿಯಲ್ಲಿ ಬರೆದಿದ್ದಾರೆ.

About the Author

ಶಾಂತಿ ನಾಯಕ
(27 March 1943)

ಲೇಖಕಿ ಶಾಂತಿ ನಾಯಕ ಅವರು ಎಂ.ಎ., ಬಿ.ಇಡಿ ಪದವೀಧರರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾಗಿ ನಿವೃತ್ತರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ 27-03-1943ರಲ್ಲಿ ಜನಿಸಿದರು. ತಂದೆ  ನಾರಾಯಣ ವೆಂಕಣ್ಣ ಕಲಗುಜ್ಞೆ,ತಾಯಿ- ದೇವಮ್ಮ ನಾರಾಯಣ ಕಲಗುಜ್ಜಿ. ಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು-(1979), ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು-(1982), ಜಾಣೆ ಕನ್ನಡವ ತಿಳಿದ್ದೇಳೆ -(1982), ಕಾಕಕ್ಕ ಗುಬ್ಬಕ್ಕ-(1985), ಜನಪದ ವೈದ್ಯಕೀಯ ಅಡುಗೆಗಳು-(1986), ರಂಗೋಲಿ-(1994),  ಕುಡಿತ ನಿಮಗೆಷ್ಟು ಹಿತ -(1995),  ಸಿಂಕೋನಾ-(1998), ಹವ್ಯಕರ ಅಡುಗೆಗಳು-(2003),  ಜನಪದ ಆಹಾರ ಪಾನೀಯಗಳು-(2004)., (ಸ್ಮರಣ ಸಂಚಿಕೆ) ಚಿನ್ನದ ಚೆನ್ನ -(2001), ಆಸರ -(2012),  ಸಜ್ಜನ -2003, ಉತ್ತರ ಕನ್ನಡ ಜಿಲ್ಲೆಯ ಸಣ್ಣಕತೆಗಳು (ಸಂ), ಜೀವ ಉಳಿಸುವ ...

READ MORE

Related Books