ಸಸ್ಯ ಪರಿಸರ

Author : ಕೃಷ್ಣಾನಂದ ಕಾಮತ್

Pages 100

₹ 90.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001,
Phone: 08022203580/01

Synopsys

ಲೇಖಕ ಡಾ. ಕೃಷ್ಣಾನಂದ ಕಾಮತ್ ಅವರು ಬರೆದ ಕೃತಿ-ಸಸ್ಯ ಪರಿಸರ. ಪ್ರಕೃತಿಯು ನಮಗೆ ನೀಡಿದ ವರ. ಅದನ್ನು ಕಾಯ್ದುಕೊಳ್ಳದಿದ್ದರೆ ವಿನಾಶ. ಮರ ಗಿಡ ಹೂಗಳದು ಒಂದು ವಿಸ್ಮಯಕಾರಿ ಜಗತ್ತು. ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಇವುಗಳಿಗೆ ಮಹತ್ವದ ಪಾತ್ರವಿದೆ. ಪ್ರಕೃತಿ ತನ್ನ ಎಲ್ಲ ಕಲ್ಪನಾಶಕ್ತಿಯನ್ನು, ಕಲಾತ್ಮಕತೆಯನ್ನು ಬಳಸಿಕೊಂಡು ಈ ಸಸ್ಯಲೋಕವನ್ನು ಸೃಷ್ಟಿಸಿರುವುದರಲ್ಲಿ ಸಂಶಯವಿಲ್ಲ. ಬೇರೆ ಬೇರೆ ಜಾತಿಯ ಮರ-ಗಿಡಗಳು, ಹೂವುಗಳು, ಎಲೆಗಳಂತೂ ಒಂದಕ್ಕಿಂತ ಒಂದು ಭಿನ್ನ! ಇನ್ನು ಹೂವುಗಳಿಗೆ ಬಣ್ಣ ಹಾಕುವ ಪ್ರಕೃತಿಯ ಕೈಚಳಕ ವಿಸ್ಮಯ ಹುಟ್ಟಿಸುತ್ತದೆ. ಒಂದೊಂದು ಜಾತಿಯ ಹಣ್ಣಿಗೂ ಬೇರೆ ಬೇರೆ ರುಚಿ! ಕೆಲವು ಹಣ್ಣುಗಳು, ವಿಷಕಾರಿಯೂ ಹೌದು. ಅಂಟು ಸುರಿಸುವ ಮರಗಳು, ರಕ್ಷಣೆಗಾಗಿ ಮುಳ್ಳು ಬೆಳೆಸಿಕೊಳ್ಳುವ ಗಿಡಗಳು! ಸಸ್ಯಪರಿಸರದ ಲೇಖನಗಳನ್ನು ಓದುತ್ತ ಹೋದಾಗ ಸಸ್ಯ ಲೋಕದ ಈ ಎಲ್ಲ ವಿಷಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ನಿಸರ್ಗ ಪ್ರೇಮಿಗಳಿಗೆ ಈ ಕೃತಿ ತುಂಬಾ ಉಪಯುಕ್ತ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books