`ಸಾಹಿತ್ಯದಿಂದ ಏನೂ ಆಗುವುದಿಲ್ಲವೆಂದು ಗೊಣಗುವ ಈ ಸಿನಿಕ ಕಾಲದಲ್ಲಿ ಅಧಿಕಾರದ ಕೋಟೆಗಳನ್ನು ಸ್ಫೋಟಿಸುವ ಛಲದಿಂದ ಹೊರಟಿರುವ ಈ ಕಾದಂಬರಿ ಜನಸಾಮಾನ್ಯರ ಮನಸ್ಸಿನಲ್ಲಿ ಸುತ್ತಿ ಸುಳಿವ ಬಂಡುಕೋರತನವನ್ನು ದಾಖಲಿಸುತ್ತದೆ' ಎನ್ನುತ್ತಾರೆ, ನಟರಾಜ್ ಹುಳಿಯಾರ್. ಅವರು ನರಸಿಂಹಮೂರ್ತಿ ಹೂವಿನಹಳ್ಳಿ ಅವರ `ಚಂಡ ವ್ಯಾಘ್ರರು' ಕಾದಂಬರಿಯ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ.
ಭ್ರಷ್ಟ ವ್ಯವಸ್ಥೆಯ ವಿರುದ್ಧ ಅಸಲಿ ಸಿಟ್ಟು, ಕುಟಿಲತೆಯನ್ನು ಬಯಲಿಗೆಳೆಯುವ ಸೀಳುಗಣ್ಣು, ಕಾದಂಬರಿಗೆ ಮಾತ್ರ ದಕ್ಕುವ ವಾಸ್ತವ ವಿವರಗಳು ಕಾಣಿಸುವ ಸತ್ಯ- ಈ ಮೂರೂ ಅಂಶಗಳು ಬೆರೆತು 'ಚಂಡ ವ್ಯಾಘ್ರರು' ಕಾದಂಬರಿ ಹುಟ್ಟಿದೆ. ಅಧಿಕಾರಶಾಹಿಯ ಕ್ರೌರ್ಯದ ವಿರುದ್ಧ ಇಂಡಿಯಾದ ಮಧ್ಯಮ ವರ್ಗದ ಜನರ ಆಳದಲ್ಲಿ ಹುದುಗಿರುವ ಅಸಹಾಯಕ ರೋಷವನ್ನು ಹೊರ ಚೆಲ್ಲುವ ಈ ಕಾದಂಬರಿ ವ್ಯಂಗ್ಯ, ವಿಡಂಬನೆಯ ಬಾಣಗಳನ್ನು ಜೋರಾಗಿಯೇ ಬಳಸಿದೆ.
ಸರ್ಕಾರಿ ಕಚೇರಿಗಳ ಭಯಾನಕ ಒಳಸುಳಿಗಳು, ಚಕ್ರವ್ಯೂಹಗಳು, ಉಡಾಫೆಗಳು... ಇವೆಲ್ಲವನ್ನೂ ಕಂಡು ವ್ಯಗ್ರಗೊಂಡ ಮುಗ್ಧ ಮನಸ್ಸಿನ ದಿಗ್ಧಮೆಯಲ್ಲಿ ಈ ಕಾದಂಬರಿಯ ಘಟನಾವಳಿಗಳು ಮೈದಾಳಿವೆ. ಸಾಹಿತ್ಯದಿಂದ ಏನೂ ಆಗುವುದಿಲ್ಲವೆಂದು ಗೊಣಗುವ ಈ ಸಿನಿಕ ಕಾಲದಲ್ಲಿ ಅಧಿಕಾರದ ಕೋಟೆಗಳನ್ನು ಸ್ಫೋಟಿಸುವ ಛಲದಿಂದ ಹೊರಟಿರುವ ಈ ಕಾದಂಬರಿ ಜನಸಾಮಾನ್ಯರ ಮನಸ್ಸಿನಲ್ಲಿ ಸುತ್ತಿ ಸುಳಿವ ಬಂಡುಕೋರತನವನ್ನು ದಾಖಲಿಸುತ್ತದೆ.
ತಮ್ಮ ಎರಡನೇ ಕಾದಂಬರಿ ಪ್ರಕಟಿಸುತ್ತಿರುವ ಗೆಳೆಯ ನರಸಿಂಹಮೂರ್ತಿಯವರ ಬರವಣಿಗೆ ಇನ್ನಷ್ಟು ಸಂಯಮ, ಅನುಕಂಪ, ಅಡಕ ಗುಣಗಳನ್ನು ಪಡೆದು ವಿಕಾಸಗೊಳ್ಳಲಿ ಎಂದು ಪ್ರೀತಿಯಿಂದ ಹಾರೈಸುವೆ.
-ನಟರಾಜ್ ಹುಳಿಯಾರ್
'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...
'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...
"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...
©2024 Book Brahma Private Limited.