Date: 14-04-2024
Location: ಬೆಂಗಳೂರು
ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ 12 ನೆಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಸವಕಲ್ಯಾಣ ಸಂಸ್ಥಾನ ಗವಿಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ರಂಭಾಪುರಿ ಶಾಖಾ ಮಠದ ಸ್ವಾಮಿಗಳಿಗೆ ಬೆಂಗಳೂರು ಆಧ್ಯಾತ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ವೈಚಾರಿಕ, ಧಾರ್ಮಿಕ ವಿಚಾರದಲ್ಲಿ ವಾಗ್ಮಿಗಳಾದ ಇವರು ಅನೇಕ ಸಾಹಿತ್ಯ ಕೃತಿ ರಚನೆ ಮಾಡಿದ್ದಾರೆ. ಸಿದ್ಧಾಂತ ಶಿಖಾಮಣಿ, ವಚನ ಸಾಹಿತ್ಯ ಬೋಧನೆಯಲ್ಲಿ ಅಪಾರ ಪರಿಶ್ರಮ ಇವರದು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ 12 ನೆಯ ಸಮ್ಮೇಳನವು ಮೇ ತಿಂಗಳು ಕೊನೆಯಲ್ಲಿ ಶಿರಸಿಯಲ್ಲಿ ಸಮ್ಮೇಳನ ಜರುಗಲಿದೆ ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚುಟುಕು ವಾಚನಾಸಕ್ತರು 9482181305 ಗೆ ಕರೆ ಮಾಡಬಹುದಾಗಿದೆ.
2023ನೇ ಸಾಲಿನ ಮಾತೋಶ್ರೀ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನಗಳನ್ನು ಆಹ್ವಾನಿಸಲಾಗಿದೆ. &nb...
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ...
ಬೆಂಗಳೂರು: ಬೆಂಗಳೂರಿನ ಬಸವ ಸಮಿತಿಯು ‘ವಿಶ್ವ ಬಸವ ಜಯಂತಿ 2024’ರ ಅಂಗವಾಗಿ ಡಾ. ಅರವಿಂದ ಜತ್ತಿ ಮಾರ್ಗದರ...
©2024 Book Brahma Private Limited.