Date: 17-11-2025
Location: ಬೆಂಗಳೂರು
ಬೆಂಗಳೂರು: ಸಾವಣ್ಣ ಪ್ರಕಾಶನದ 16ನೇ ವರ್ಷದ ವಾರ್ಷಿಕೋತ್ಸವ ಮತ್ತು ಆರು ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ 2025 ನ. 16 ಭಾನುವಾರದಂದು ನಡೆಯಿತು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಕುಂಟಿನಿ ಅವರ ʻಕೃಷ್ಣ ಭಾರತʼ, ರಂಗಸ್ವಾಮಿ ಮೂಕನಹಳ್ಳಿ ಅವರ ʻಈ ಹಣಕಾಸು ತಪ್ಪುಗಳನ್ನು ನೀವು ಮಾಡಬೇಡಿʼ, ಸತ್ಯೇಶ ಬೆಳ್ಳೂರು ಅವರ ʻಸಮಯ = ಹಣʼ, ವಿರೂಪಾಕ್ಷ ದೇವರಮನೆ ಅವರ ʻಮಕ್ಕಳು ಮಕ್ಕಳಾಗಿರಲು ಬಿಡಿʼ, ಜಗದೀಶ ಶರ್ಮಾ ಅವರ ʻಕುರುಕ್ಷೇತ್ರʼ, ಸತ್ಯೇಶ ಬೆಳ್ಳೂರು ಅವರ ʻಸ್ಪೂರ್ತಿಯ ಚಿಲುಮೆ ಸರ್.ಎಂ. ವಿಶ್ವೇಶ್ವರಯ್ಯʼ ಕೃತಿಗಳು ಲೋಕಾರ್ಪಣೆಗೊಂಡವು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ಹಿರಿಯ ಶಿಕ್ಷಣ ತಜ್ಞ, ವಿದ್ವಾಂಸ ಗುರುರಾಜ ಕರಜಗಿ, ಕೇಂದ್ರ ಜಿಎಸ್ಟಿ ಆಯುಕ್ತ ಡಾ. ಎಂ.ಕೊಟ್ರಸ್ವಾಮಿ, ಪ್ರಕಾಶಕ ಜಮೀಲ್ ಸಾವಣ್ಣ ಜೊತೆಯಾಗಿ ಅನಾವರಣಗೊಳಿಸಿದರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.