Poem

ಅಂದರ್ ಬಾಹರ್

ಮೇಣದ ಬತ್ತಿಯ ವಾಲಾಡುವ 
ಮಬ್ಬು ಬೆಳಕು
ಒಂದು ಕಟ್ಟು ಇಸ್ಫೀಟ್ ಗರಿ
ಮಾಸಿದ ನೋಟಿನ ಕಂತು
ಉಕ್ಕುಮ್ ಮೇಲೆ 
ಸೋತ , ಗೆದ್ದ ಕಂಗಳ ಕಾತುರದ ನೋಟ

ಎಕ್ಕ ರಾಜ ರಾಣಿ
ಗುಲಾಮ ಗರಿಗಳ ನಡುವೆ
ಯಾವುದೊ ಹೆಸರು ಬರೆದು 
ಕಳೆದು ಹೋದ ನೋಟುಗಳ ಗುರುತು 

ಸರಿ ಬೆಸ ಸಂಖ್ಯೆಗಳ
ಹೊಯ್ದಾಟದಲಿ 
ಐಡೆಂಟಿಂಟಿ ಕಳೆದ 
ಬದುಕಿನ ಗೆರೆಗಳು 
ಛಾಪು ಮೂಡಿಸಿದ ಹೊಳಪುಗಳು

ಆಟದ ಹೊರಗೆ ಕೂತು
ಎಲ್ಲವು ಕಂಡು 
ಕೇಕೆ ಹಾಕುವ ಜೋಕರ್ ಕಾರ್ಡ್ ಗಳ ನಗುವು
ಕರಗುವ ಮೇಣದ ಬತ್ತಿಯ ತೋರಿಸಿ 
ಬದುಕು ಇಷ್ಟೇ ಎಂದು
ನೀತಿ ಪಾಠವ ಬೋಧಿಸುವಂತಿತ್ತು....  ....
           

By: ದಾಸ್ ರಂಗೇನಹಳ್ಳಿ

Comments[0] Likes[4] Shares[0]

Submit Your Comment

Latest Comments

No comments are available!